ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಗೋಪಸಂದ್ರ ಗ್ರಾಮದ ಬಳಿ ರಾತ್ರ 11 ಸುಮಾರಿಗೆ ಸಂಭವಿಸಿದೆ.
ಮುತ್ತಾನಲ್ಲೂರು ನಿವಾಸಿ ಸತೀಶ್ ಹಲ್ಲೆಗೊಳಗಾದ ವ್ಯಕ್ತಿ, ಮುನಿಯಲ್ಲಪ್ಪ ಮತ್ತು ತಂಡದವರಿಂದ ಸತೀಶ್ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಮ್ಯಾಟ್ರಮೋನಿ ಸೈಟ್ನಲ್ಲಿ ವರನ ಹುಡುಕಾಟದಲ್ಲಿದ್ದ ಮಹಿಳೆಗೆ ವಂಚನೆ: ಆರೋಪಿ ಬಂಧನ
ಬುಧವಾರ ರಾತ್ರಿ 11 ಗಂಟೆಗೆ ಸಮಯದಲ್ಲಿ ಯುಗಾದಿ ಹಬ್ಬದ ಹಿನ್ನೆಲೆ ಸತೀಶ್ ಸ್ನೇಹಿತರ ಜೊತೆ ಹುಣಸೆ ಬೀಜ ಆಟ ಆಡುತ್ತಿದ್ದಾಗ ಹಣ ಕಳೆದುಕೊಂಡ ವ್ಯಕ್ತಿ ಹಾಗು ಮತ್ತೊಬ್ಬ ವ್ಯಕ್ತಿ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸತೀಶ್ ಜಗಳ ಬಿಡಿಸಲು ಮುಂದಾಗಿದ್ದಾನೆ, ಈ ವೇಳೆ ಜಗಳ ಸತೀಶ್ ಮೇಲೆ ತಿರುಗಿದ್ದು ಮಾತಿಗೆ ಮಾತು ಬೆಳೆದ ಜಗಳ ಮತ್ತೆ ಶಾಂತವಾಗಿ ಮನೆಗೆ ವಾಪಾಸ್ಸಾಗಿದ್ದಾರೆ.
ಹಗೆ ಬಿಡದೆ ಗೋಪಸಂದ್ರದ ಮುನಿಯಲ್ಲಪ್ಪ ಮತ್ತಿತರರು ಸೇರಿ ಮನೆಯಲ್ಲಿದ್ದ ಸತೀಶ್ ನನ್ನು ಮನೆಯಿಂದ ಹೊರಗೆ ಕರೆದ ಚಾಕು ಡ್ರಾಗರ್ ನಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.