Friday, May 10, 2024

ಯುಗಾದಿ ಹಬ್ಬದಂದು ಜಗಳ ಬಿಡಿಸಲು ಹೋದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ!

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಗೋಪಸಂದ್ರ ಗ್ರಾಮದ ಬಳಿ ರಾತ್ರ 11 ಸುಮಾರಿಗೆ ಸಂಭವಿಸಿದೆ.

ಮುತ್ತಾನಲ್ಲೂರು ನಿವಾಸಿ ಸತೀಶ್ ಹಲ್ಲೆಗೊಳಗಾದ ವ್ಯಕ್ತಿ, ಮುನಿಯಲ್ಲಪ್ಪ ಮತ್ತು ತಂಡದವರಿಂದ ಸತೀಶ್​ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಮ್ಯಾಟ್ರಮೋನಿ ಸೈಟ್​ನಲ್ಲಿ ವರನ ಹುಡುಕಾಟದಲ್ಲಿದ್ದ ಮಹಿಳೆಗೆ ವಂಚನೆ: ಆರೋಪಿ ಬಂಧನ

ಬುಧವಾರ ರಾತ್ರಿ 11 ಗಂಟೆಗೆ ಸಮಯದಲ್ಲಿ ಯುಗಾದಿ ಹಬ್ಬದ ಹಿನ್ನೆಲೆ ಸತೀಶ್​ ಸ್ನೇಹಿತರ ಜೊತೆ ಹುಣಸೆ ಬೀಜ ಆಟ ಆಡುತ್ತಿದ್ದಾಗ ಹಣ ಕಳೆದುಕೊಂಡ ವ್ಯಕ್ತಿ ಹಾಗು ಮತ್ತೊಬ್ಬ ವ್ಯಕ್ತಿ ನಡುವೆ ಜಗಳ ಶುರುವಾಗಿದೆ. ಈ ವೇಳೆ ಸತೀಶ್​ ಜಗಳ ಬಿಡಿಸಲು ಮುಂದಾಗಿದ್ದಾನೆ, ಈ ವೇಳೆ ಜಗಳ ಸತೀಶ್​ ಮೇಲೆ ತಿರುಗಿದ್ದು ಮಾತಿಗೆ ಮಾತು ಬೆಳೆದ ಜಗಳ ಮತ್ತೆ ಶಾಂತವಾಗಿ ಮನೆಗೆ ವಾಪಾಸ್ಸಾಗಿದ್ದಾರೆ.

ಹಗೆ ಬಿಡದೆ ಗೋಪಸಂದ್ರದ ಮುನಿಯಲ್ಲಪ್ಪ ಮತ್ತಿತರರು ಸೇರಿ ಮನೆಯಲ್ಲಿದ್ದ ಸತೀಶ್​ ನನ್ನು ಮನೆಯಿಂದ ಹೊರಗೆ ಕರೆದ ಚಾಕು ಡ್ರಾಗರ್​ ನಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES