Tuesday, May 21, 2024

ಹಸುಗಳಿಗೆ ಮೇವು ಕಟಾವು ಮಾಡಿದ ‘ಕಾಟೇರ’ : ‘ದಾಸ’ನ ಕೆಲಸಕ್ಕೆ ಸೆಲೆಬ್ರೆಟಿಗಳ ಮೆಚ್ಚುಗೆ

ಬೆಂಗಳೂರು : ಮೈಸೂರಿನ ತಮ್ಮ ಫಾರ್ಮ್ ಹೌಸ್​ನಲ್ಲಿ ರಿಲ್ಯಾಕ್ಸ್​ ಮೂಡಿ​ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ.

ತಮ್ಮ ಕೈ ನೋವನ್ನೂ ಲೆಕ್ಕಿಸದೇ ಫಾರ್ಮ್​ ಹೌಸ್​ನಲ್ಲಿರುವ ಜಾನುವಾರುಗಳಿಗೆ ಸ್ವತಃ ತಾವೇ ಮೇವು ಕಟಾವು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಚ್ಚು ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಡೆವಿಲ್’ ದಿ ಹಿರೋ ಚಿತ್ರದ ಶೂಟಿಂಗ್ ವೇಳೆ ನಟ ದರ್ಶನ್ ಎಡಗೈ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆಯೇ ಲೋಕಸಭಾ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳ ಪರ ಪ್ರಚಾರವನ್ನೂ ನಡೆಸಿದ್ದರು. ಇದೀಗ, ದರ್ಶನ್ ಸಂಪೂರ್ಣ ರಿಲ್ಯಾಕ್ಸ್​ ಮೂಡಿನಲ್ಲಿದ್ದಾರೆ.

ತಮ್ಮ ಆಪ್ತರೊಂದಿಗೆ ನಟ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್​ನಲ್ಲಿ ಬೀಡು ಬಿಟ್ಟಿದ್ದಾರೆ. ದರ್ಶನ್ ಪ್ರಾಣಿ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಮಗೆ ಬಿಡುವಿದ್ದಾಗ ಹೆಚ್ಚು ಪ್ರಾಣಿಗಳ ಜೊತೆಗೆ ಅಥವಾ ಫೋಟೋ ಶೂಟ್​ಗೆ ತೆರಳುತ್ತಾರೆ. ಆದರೆ, ಕೈ ನೋವು ಇರುವುದರಿಂದ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.

ದರ್ಶನ್ ತಮ್ಮ ತೋಟದಲ್ಲಿ ಸಾಕಷ್ಟು ಜಾನುವಾರುಗಳನ್ನ ಸಾಕಿದ್ದು, ಇದೀಗ ಅವುಗಳ ಹಾರೈಕೆಗೆ ಸಮಯ ಮೀಸಲಿಟ್ಟಿದ್ದಾರೆ. ಮಷಿನ್​ನಲ್ಲಿ ಹಸಿ ಹುಲ್ಲನ್ನ ಕಟ್ ಮಾಡುವುದು, ಜಾನುವಾರುಗಳಿಗೆ ಮೇವು ಹಾಕುವುದು, ಕುದುರೆ ಹಾರೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ.

ಪ್ರಾಣಿಗಳ ಮೇಲೆ ಅಪಾರ ಕಾಳಜಿ

ಜಾನುವಾರುಗಳಿಗೆ ಮೇವು ಕತ್ತರಿಸುತ್ತಿರುವ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಪ್ರಾಣಿಗಳ ಮೇಲೆ ದರ್ಶನ್​ ಅವರಿಗಿರುವ ಕಾಳಜಿ ಬಗ್ಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಡೆವಿಲ್ ಸಿನಿಮಾದ ಶೂಟಿಂಗ್ ಸೆಟ್​ಗೆ ನಟ ದರ್ಶನ್ ಎಂಟ್ರಿ ಕೊಡಲಿದ್ದಾರೆ.

ಡೆವಿಲ್ ಮೇಕಿಂಗ್ ವಿಡಿಯೋ ರಿಲೀಸ್

ಇಂದು ಅಕ್ಷಯ ತೃತೀಯ ಹಾಗೂ ಬಸವ ಜಯಂತಿ. ಈ ಹಿನ್ನೆಲೆಯಲ್ಲಿ ಡೆವಿಲ್ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿದೆ. ಡೆವಿಲ್ ಚಿತ್ರಕ್ಕೆ ಪ್ರಕಾಶ್ ವೀರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಾರಕ್ ಸಿನಿಮಾ ಬಳಿಕ ದರ್ಶನ್ ಅವರ ಜೊತೆ ಈ ಸಿನಿಮಾ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES