Monday, May 20, 2024

ಪ್ರಜ್ವಲ್ ನಿತ್ಯಾನಂದ ಇರುವ ಜಾಗಕ್ಕೆ ಹೋಗಲು ರೆಡಿ ಆಗಿದ್ದಾರೆ : ಎಂ. ಲಕ್ಣ್ಮಣ್

ಮೈಸೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಿತ್ಯಾನಂದ ಇರುವ ಜಾಗಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಎಂ. ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಕರಣ ಸಿಬಿಐಗೆ ವಹಿಸಿ ಹಳ್ಳ ಹಿಡಿಸಲು ಯತ್ನ ಮಾಡಲಾಗುತ್ತಿದೆ. ಅಲ್ಲಿ ಇರುವುದು ಐಪಿಎಸ್ ಅಧಿಕಾರಿಗಳು. ಇಲ್ಲಿ ಇರುವುದು ಸಹ ಐಪಿಎಸ್ ಅಧಿಕಾರಿಗಳೇ. ಯಾಕೆ ಸಿಬಿಐ ಬಗ್ಗೆ ನಿಮಗೆ ಅಷ್ಟು ಪ್ರೀತಿ? ಇಲ್ಲಿರುವ ಅಧಿಕಾರಿಗಳು ಕೂಡ ಸಮರ್ಥರು ಎಂದು ಕುಟುಕಿದ್ದಾರೆ.

ಮಾಸ್ ರೇಪಿಸ್ಟ್ ಪರ ಮೋದಿ ಪ್ರಚಾರ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಕರಣದಲ್ಲಿ ಸಿಕ್ಕಿಸುವುದಕ್ಕೆ ಹುನ್ನಾರ ಮಾಡುತ್ತಿದ್ದೀರಾ? ಕುಮಾರಸ್ವಾಮಿ ಅವರೇ ಜನರ ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸಿ. ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಕ್ಯಾಂಪೇನ್ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ತಿಳಿಸಿದ್ದಾರೆ.

ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ

ಕುಮಾರಸ್ವಾಮಿ ಅವರೇ, ಹಾಸನದಲ್ಲಿ ಪ್ರಜ್ವಲ್ ರೇವಣ್ಣರ ಕೈ ಎತ್ತಿ ತಪ್ಪು ಮಾಡಿದ್ದಾನೆ ಕ್ಷಮಿಸಿ ಎಂದು ಚುನಾವಣೆ ಸಮಯದಲ್ಲಿ ಯಾಕೆ ಹೇಳಿದ್ರಿ? ನನ್ನ ಮಗ ಇದ್ದಂತೆ ಅಂದ್ರಿ, ಈಗ ಬೇರೆ ಬೇರೆ ಎನ್ನುತ್ತಿದ್ದೀರಿ. ಕುಮಾರಸ್ವಾಮಿ ಅವರೇ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಈ ಪ್ರಕರಣವನ್ನು ಎಸ್​ಐಟಿ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದೆ ಎಂದು ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES