Friday, May 10, 2024

ದೇಶದ್ರೋಹಿಗಳ ಪರ ನಿಂತ ನಾಸಿರ್​ ಹುಸೇನ್​ ಮೇಲೆ ಕೇಸು ಹಾಕಬೇಕು: ಶೋಭಾ ಕರಂದ್ಲಾಜೆ

ಉಡುಪಿ: ದೇಶದ್ರೋಹಿಗಳ ಪರ ನಿಂತ ನಾಸಿರ್​ ಹುಸೇನ್​ ಮೇಲೆ ಕೇಸು ಹಾಕಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾಸಿರ್ ಹುಸೇನ್ ಬೆಂಬಲಿಗರು ನಮ್ಮ ವಿಧಾನಸೌಧ ನಮ್ಮ ಶಕ್ತಿ ಕೇಂದ್ರದಲ್ಲಿ ಜಿಂದಾಬಾದ್ ಎಂದು ವಿಧಾನ ಸಭೆಯಲ್ಲಿ ಕೂಗಿದ್ದಾರೆ .ಪ್ರಶ್ನೆ ಮಾಡಲು ಹೋದ ಪತ್ರಕರ್ತರಿಗೆ ನಾಸೀರ್ ಹುಸೇನ್ ಅವಾಜ್ ಹಾಕುತ್ತಾರೆ. ಇದು ಕಾಂಗ್ರೆಸ್‌ ನ ಮೆಂಟಾಲಿಟಿ ಪಾಕಿಸ್ತಾನದ ಪರ ಇದೆ ಎಂಬುವುದು ಸಾಬೀತು ಆಗಿದೆ ಎಂದರು.

ಸಿದ್ದರಾಮಯ್ಯ ಇತ್ತೀಚೆಗೆ ಸಂವಿಧಾನದ ಕಾರ್ಯಕ್ರಮಗಳನ್ನೂ ಮಾಡುತ್ತಿದ್ದಾರೆ. ಆದ್ರೆ ಇಂತಹ  ಘಟನೆಗಳಿಂದ ದೇಶದ ಸಮಗ್ರತೆ ಸಾರ್ವಭೌಮತೆಯ ಮೇಲೆ ಕೆಟ್ಟಪರಿಣಾಮ ಬೀರುವುದಿಲ್ಲವೇ   ಸಿದ್ದರಾಮಯ್ಯನವರೇ ನಿಮಗೆ ಸಂವಿಧಾನದ ಬಗ್ಗೆ ಗೌರವ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈಕಾರ ಹಾಕಿದವರು ಯಾರೇ ಆದರೂ ದೇಶದ್ರೋಶಹಿಗಳು: ಸಚಿವ ಜಮೀರ್​ ಅಹ್ಮದ್​

ನಿಮಗೆ  ಸಂವಿಧಾನದ ಬಗ್ಗೆ ನಂಬಿಕೆ ಇದ್ದರೆ ತಕ್ಷಣ ಪಾಕಿಸ್ತಾನ ಜಿಂದಾಬಾದ್ ಅಂದವರನ್ನು ಅರೆಸ್ಟ್ ಮಾಡಿ ಅಪರಾಧಿ ದೇಶದ್ರೋಹಿಗಳನ್ನು ಕೂಡಲೇ ಬಂಧನ ಮಾಡಬೇಕು.ಅವರ ಪರವಾಗಿ ನಿಂತ ನಾಸಿರ್ ಹುಸೇನ್ ಮೇಲೆ ಕೇಸು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಸಿರ್​ ಹುಸೇನ್​ ರಾಜ್ಯಸಭೆಗೆ ಹೋಗಬಾರದು

ಕಾಂಗ್ರೆಸ್ ದೇಶ ವಿಭಜನೆ ಪಾಕಿಸ್ತಾನ ಜಿಂದಾಬಾದ್ ಮನಸ್ಥಿತಿಯಲ್ಲಿದೆ. ಇಂಥ ಮನಸ್ಥಿತಿಯವರು ದೇಶ ಆಳಲು ಸಾಧ್ಯವಿಲ್ಲ ನಾಸಿರ್ ಹುಸೇನ್ ಅವರನ್ನು ರಾಜ್ಯಸಭೆಗೆ ಸ್ವೀಕಾರ ಮಾಡಬಾರದು. ಮೆಂಬರ್ಶಿಪನ್ನು ರದ್ದು ಮಾಡಬೇಕು. ಇಂತವರು ರಾಜ್ಯಸಭೆ, ಲೋಕಸಭೆಗೆ ಹೋದರೆ ನಮ್ಮ ದೇಶದ ಪರಿಸ್ಥಿತಿ ಏನು? ನಮ್ಮ ದೇಶದ ಮಾಹಿತಿಯನ್ನ ಪಾಕಿಸ್ತಾನಕ್ಕೆ ಕೊಡಲ್ಲ ಎಂಬುದಕ್ಕೆ ಗ್ಯಾರಂಟಿ ಏನು? ಯಾವ ಮನಸ್ಥಿತಿಯವರನ್ನು ನೀವು ರಾಜ್ಯಸಭೆಗೆ ಕಳುಹಿಸುತ್ತಿದ್ದೀರಿ? ಪಾಕಿಸ್ತಾನದ ಮನಸ್ಥಿತಿಯವರನ್ನ ಆಯ್ಕೆ ಮಾಡಿದರೆ ದೇಶದ ಪರಿಸ್ಥಿತಿ ಏನಾಗಬಹುದು..? ಎಂದರು.

ಸಿದ್ದರಾಮಯ್ಯನವರ ಅಲ್ಪಸಂಖ್ಯಾತರ ಒಲೈಕೆ ಇಷ್ಟೆಲ್ಲ ಮಾಡಿಸಿದೆ. ಪಾಕಿಸ್ತಾನ ಪರ ಇರುವವರು ವಿಧಾನಸೌಧ ಮುಖ್ಯಮಂತ್ರಿ ಚೇಂಬರ್ ಸಿಎಂ ಮನೆಗೆ ಹೋಗುತ್ತಾರೆ. ಅವರಿಗೆ ಎಲ್ಲಾ ಕಡೆ ಬಿರಿಯಾನಿ ಊಟ ಸಿಗುತ್ತದೆ ಆ ಕಾರಣಕ್ಕೋಸ್ಕರ ಧೈರ್ಯ ಬಂದಿದೆ. ಯಾವುದೋ ಸರ್ಕಾರ ಬರುತ್ತೆ ಯಾವುದೋ ಸರ್ಕಾರ ಹೋಗುತ್ತೆ ಅಧಿಕಾರ ಇರಲಿ ಇಲ್ಲದಿರಲಿ ಸಿದ್ದರಾಮಯ್ಯ  ದೇಶದ ಸಾರ್ವಭೌಮತ್ವ ಅಖಂಡತೆ ಎತ್ತಿ ಹಿಡಿಯುವ ಕ್ಯಾಪ್ ಧರಿಸಿದ್ದೀರಿ. ಆ ಕ್ಯಾಪ್ ಗೆ ಶಕ್ತಿ ಇದ್ದರೆ ಅವರೆಲ್ಲರನ್ನ ಅರೆಸ್ಟ್ ಮಾಡಿ ದೇಶದ್ರೋಹದ ಕೇಸ್ ಹಾಕಿ ಜೈಲಿಗಟ್ಟಿ ಎಂದರು.

RELATED ARTICLES

Related Articles

TRENDING ARTICLES