Friday, May 10, 2024

ಸಿದ್ದರಾಮಯ್ಯ ಇಸ್ಪೀಟ್ ಗಿರಾಕಿ ಎಂದು ವಾಗ್ದಾಳಿ ನಡೆಸಿದ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ರಾಜ್ಯದ ಜನರಿಗೆ ನೆಮ್ಮದಿ ಇಲ್ಲವಾಗಿದೆ. ಅವರಿಗೆ ಮಾನ ಮರ್ಯಾದೆ ಇದ್ದರೇ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳಲಿ ಎಂದು ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಮ್ಮ ನಾಯಕರನ್ನ ವೈಯಕ್ತಿಕವಾಗಿ ನಿಂಧಿಸುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ಸಿದ್ದು ಪುಕ್ಕಲು ನಾಯಕರು ಎಂದಿದ್ದಾರೆ. ಸಿದ್ದರಾಮಯ್ಯರನ್ನ ನಾವು ತಿಕ್ಕಲು ನಾಯಕರು ಎನ್ನುತ್ತೇವೆ ಎಂದರು.

ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​​ ಕಟೀಲ್​ ಅವರಿಗೆ ಜೋಕರ್ ಎಂದ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ತರ ಕಟೀಲ್​ ಅವರಿಗೆ ಇಸ್ಪೀಟ್ ಬರಲ್ಲ. ಸಿದ್ದರಾಮಯ್ಯ ಇಸ್ಪೀಟ್ ಗಿರಾಕಿ. ದೇವೇಗೌಡರ ಕಾಲು ಹಿಡಿದು ಉಪ ಮುಖ್ಯಮಂತ್ರಿಯಾದರೆ, ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು ಎಂದು ನಾರಾಯಣಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES