Friday, May 10, 2024

ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ದೂರು ನೀಡಿದ್ರಾ ಡಿ.ಕೆ ಶಿವಕುಮಾರ್​​.?

ಬೆಂಗಳೂರು: ರಾಜ್ಯದಲ್ಲಿ 21 ದಿನಗಳ ಕಾಲ ಭಾರತ್ ಜೋಡೋ ಯಾತ್ರೆ ನಡೆಯಲಿರುವ ಹಿನ್ನಲೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿಯಲ್ಲಿ ಸಿದ್ದರಾಮಯ್ಯ ಬೆಂಬಲಿಗರನ್ನ ಕಡೆಗಾಣಿಸಿದ್ದು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹೈಕಮಾಂಡ್​ ಮಟ್ಟದಲ್ಲಿ ದೂರು ನೀಡಿದ್ರಾ ಎಂಬ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಇತ್ತೀಚಿಗೆ ಭಾರತ್​ ಜೋಡೋ ಯಾತ್ರೆಗೆ ಜನರನ್ನ ಕರೆದುಕೊಂಡು ಬರೋದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್​ ನಾಯಕ ಆರ್​​.ವಿ ದೇಶಪಾಂಡೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಈ ಎಲ್ಲಾ ಸುದ್ದಿ ನಡೆಯುತ್ತಿರುವ ಬೆನ್ನಲೆಯಲ್ಲಿ ಭಾರತ್​ ಜೋಡೋ ಯಾತ್ರೆಗೆ ಸಮಿತಿ ರಚನೆ ಮಾಡಿದ್ದು, ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಗುರುತಿಸಿಕೊಂಡಿದ್ದ ಆರ್​ವಿ ದೇಶಪಾಂಡೆ ಅವರಿಗೆ ಯಾವುದೇ ಸ್ಥಾನ ನೀಡಿದೆ ಕಡೆಗಣಿಸೋ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಸಿದ್ದರಾಮಯ್ಯ ಬೆಂಬಲಿಗರಿಗೆ  ಒಂದು ಸಂದೇಶ ಜಾರಿ ಮಾಡಿದ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.

RELATED ARTICLES

Related Articles

TRENDING ARTICLES