Saturday, May 11, 2024

BMTC ಬಸ್‌ನಡಿ ಅವಿತ ಚಿರತೆ ಮರಿ: ಚಾಲಕನ ಮೇಲೆ ಅಟ್ಯಾಕ್; ಮುಂದೇನಾಯ್ತು?

ಬೆಂಗಳೂರು: ಬೆಂಗಳೂರಿನ ಹೊರವಲಯದ ತುರಹಳ್ಳಿ ಅರಣ್ಯ ಪ್ರದೇಶದಿಂದ ಬರುತ್ತಿದ್ದ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್​​ ಹತ್ತಲು ಚಿರತೆ ಮರಿಯೊಂದು ಯತ್ನಿಸಿರುವಂತಹ ಘಟನೆ ನಡೆದಿದೆ.

ಹೌದು, ತುರಹಳ್ಳಿ ಫಾರೆಸ್ಟ್‌ ಕಡೆಯಿಂದ ಚಿರತೆ ತನ್ನ ಮರಿಯ ಜೊತೆಗೆ ಆಗಮಿಸಿದ್ದು, ತಕ್ಷಣವೇ ಬರುತ್ತಿದ್ದ ಬಿಎಂಟಿಸಿ ಬಸ್‌ ಬ್ರೇಕ್‌ ಹಾಕಿದೆ.

ಚಾಲಕನ ಮೇಲೆ ದಾಳಿ ಯತ್ನ!
ಈ ವೇಳೆಗೆ ತಾಯಿ ಚಿರತೆ ಓಡಿ ತಪ್ಪಿಸಿಕೊಂಡರೆ, ಮರಿ ಚಿರತೆ ಬಸ್‌ನಡಿ ಅವಿತುಕೊಂಡಿತು. ಇದನ್ನ ಗಮಿನಿಸಿದ ಬಸ್‌ ಡ್ರೈವರ್‌ ಮರಿಗೆ ನೀರು ಕುಡಿಸಲು ಮುಂದಾಗಿದ್ದಾರೆ. ಈ ವೇಳೆ ಚಿರತೆ ಮರಿಯು ಚಾಲಕನ ಮೇಲೆಯೇ ದಾಳಿಗೆ ಮುಂದಾಗಿದೆ.

ತದನಂತರ, ಅರಣ್ಯ ಇಲಾಖೆ ಸಹಾಯದಿಂದ ಚಿರತೆ ಮರಿಯನ್ನ ರಕ್ಷಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮರಿ ಚಿರತೆಯನ್ನು ಪರಿಶೀಲನೆ ನಡೆಸಿದ್ದು, ತಾಯಿ ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆ ಮುಂದಾಗಿದೆ.

 

RELATED ARTICLES

Related Articles

TRENDING ARTICLES