ಚಾಲಕನ ಮೇಲೆ ದಾಳಿ ಯತ್ನ!
ಈ ವೇಳೆಗೆ ತಾಯಿ ಚಿರತೆ ಓಡಿ ತಪ್ಪಿಸಿಕೊಂಡರೆ, ಮರಿ ಚಿರತೆ ಬಸ್ನಡಿ ಅವಿತುಕೊಂಡಿತು. ಇದನ್ನ ಗಮಿನಿಸಿದ ಬಸ್ ಡ್ರೈವರ್ ಮರಿಗೆ ನೀರು ಕುಡಿಸಲು ಮುಂದಾಗಿದ್ದಾರೆ. ಈ ವೇಳೆ ಚಿರತೆ ಮರಿಯು ಚಾಲಕನ ಮೇಲೆಯೇ ದಾಳಿಗೆ ಮುಂದಾಗಿದೆ.
ತದನಂತರ, ಅರಣ್ಯ ಇಲಾಖೆ ಸಹಾಯದಿಂದ ಚಿರತೆ ಮರಿಯನ್ನ ರಕ್ಷಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮರಿ ಚಿರತೆಯನ್ನು ಪರಿಶೀಲನೆ ನಡೆಸಿದ್ದು, ತಾಯಿ ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆ ಮುಂದಾಗಿದೆ.