ಕಲಬುರಗಿ: ಕಳೆದ ಚುನಾವಣೆಯಲ್ಲಿ ಸುಮಲತಾಗೆ ಸಪೋರ್ಟ್ ಮಾಡಿದ್ದೀವಿ ಅದ್ರೆ ಅವರು ಗೆದ್ದ ಮೇಲೂ ಬಿಜೆಪಿ ಸೇರಲಿಲ್ಲ ಎಂದು ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರಿಗೆ ಕಳೆದ ಭಾರಿ ಚುನಾವಣೆಯಲ್ಲಿ ನಾವೆಲ್ಲಾ ಸಪೋರ್ಟ್ ಮಾಡಿದ್ದೀವಿ ಆಗ ನಾನೇ ಮಂಡ್ಯ ಉಸ್ತುವಾರಿ ಇದ್ದೆ.ಅವರು ಗೆದ್ದ ಮೇಲೆ ಪಾರ್ಟಿ ಸೇರಬೇಕಿತ್ತು. ಗೆದ್ದ ಆರು ತಿಂಗಳೊಳಗೆ ಪಕ್ಷ ಸೇರ್ಪಡೆ ಆಗಬೇಕಿತ್ತು ಆದರೆ ಅವರು ಬಿಜೆಪಿಗೆ ಸುಮಲತಾ ಅವರು ಸೇರಿಲ್ಲ ಎಂದರು.
ನಮ್ಮ ಕೇಂದ್ರ ನಾಯಕರು ಸಮಲತಾ ಜೊತೆ ಮಾತನಾಡ್ತಿದ್ದಾರೆ ಅವರ ಮನವೊಲಿಸೋ ಕೆಲಸ ಮಾಡಿದ್ದಾರೆ ಅಷ್ಟು ಆದ ಮೇಲೆ ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು.