Friday, May 10, 2024

ರಾಜ್ಯದಲ್ಲಿ ಪಾಕಿಸ್ತಾನದ ಮಕ್ಕಳು ಹುಟ್ಟುಕೊಂಡಿದ್ದಾರೆ : ಆರ್​.ಅಶೋಕ್​

ಕಲಬುರಗಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ನಮ್ಮ ರಾಜ್ಯದದಲ್ಲಿ ಪಾಕಿಸ್ತಾನದ ಮಕ್ಕಳು ಹುಟ್ಟುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ಕಿಡಿಕಾರಿದ್ಧಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅಶಾಂತಿಯ ತೋಟವಾಗ್ತಿದೆ. ಆ ಅಶಾಂತಿಯ ತೋಟದಲ್ಲಿ ರಕ್ತದ ಕಲೆಗಳಯ ಕಾಣ್ತಿವೆ. ಅದರಲ್ಲೂ ಕಲಬುರಗಿಯಲ್ಲಿ ಅತೀ ಹೆಚ್ಚು ರಾಜಕೀಯ ಪ್ರೇರಿತ ಕೊಲೆಗಳು ಆಗ್ತಿವೆ ಎಂದು ಹೇಳಿದ್ದರು.

ಸಿದ್ದರಾಮಯ್ಯ ಯಾವಾಗ ಅಧಿಕಾರಕ್ಕೆ ಬರುತ್ತಾರೋ ಅವಾಗ ಭಯೋತ್ಪಾದನೆ ತಣಾವಾಗಿರುತ್ತೆ. ಶಕ್ತಿ ಸೌಧದಲ್ಲಿ ಪಾಕ್  ಜಿಂದಾಬಾದ್ ಘೋಷಣೆ ಕೂಗಿದ್ದವರನ್ನ ಬಂಧಿಸಿದ್ದಾರೆ.ಇನ್ನು ಇದರಲ್ಲಿ ಬಹಳಷ್ಟು ಜನ ಪಾಲುದಾರಾಗಿದ್ದಾರೆ. ರಾಜ್ಯದಲ್ಲಿ ಪಾಕಿಸ್ತಾನದ ಪರ ಮಕ್ಕಳು ಹುಟ್ಟಿಕೊಂಡಿದ್ದಾರೆ. ಇವರೆಲ್ಲಾ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತರು. ಆದ್ರೆ ಇವರ ಬಣ್ಣ ಎಫ್ ಎಸ್ ಎಲ್ ರಿಪೋರ್ಟ್‌ ನಲ್ಲಿ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ಇದನ್ನ ಬಿಜೆಪಿ ಪ್ರೇರಿತ ಎಂದಿದ್ದರು, ಅವರೆಲ್ಲಾ ಇವಾಗ ಏನ್ ಹೇಳ್ತಾರೆ. ಇವಾಗ ನಿಮ್ಮ ಧ್ವನಿ ಅಡಗಿತಾ..? ಕಾಂಗ್ರೆಸ್ ಅಲ್ಪಸಂಖ್ಯಾತರ ಒಲೈಕೆ ಮಾಡ್ತಿದೆ ಎಂಪಿ ಚುನಾವಣೆಗೋಸ್ಕರ ಒಲೈಕೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಿಂದೂಗಳನ್ನ ದ್ವೇಷ ಮಾಡ್ತಿದೆ. ರಾಜ್ಯ ಭಯೋತ್ಪಾದಕರ ತಾಣ ಆಗೋಕೆ ಬಿಡಬೇಡಿ ಎಂದು ಗುಡುಗಿದ್ದರು.

ಸಿಎಂ ಸಿದ್ದರಾಮಯ್ಯನವರೇ ನೀವು ಹಿಂದೂ ವಿರೋಧಿ ಎನ್ನೋದನ್ನ ಪದೇ ಪದೇ ಪ್ರೂವ್ ಆಗ್ತಿದೆ ಎಂದರು.

 

RELATED ARTICLES

Related Articles

TRENDING ARTICLES