Thursday, May 9, 2024

ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ಏಕೆ ಬರುತ್ತಿಲ್ಲ: ಹೆಚ್‌. ವಿಶ್ವನಾಥ್‌

ಬೆಂಗಳೂರು: ಕುರುಬ ಸಮುದಾಯ ಎಸ್ಟಿ ಮೀಸಲಾತಿಗಾಗಿ ಈಶ್ವರಪ್ಪ ಒಬ್ಬರೇ ಹೋರಾಟ ಮಾಡುತ್ತಿಲ್ಲ.  ಸ್ವಾಮೀಜಿಗಳು ಸೇರಿ ಇಡೀ ಸಮಾಜವೇ ಒಂದಾಗಿದೆ. ಆದರೆ, ಸಿದ್ದರಾಮಯ್ಯ ಏಕೆ ಬರುತ್ತಿಲ್ಲ ಎಂದು ಹೆಚ್‌. ವಿಶ್ವನಾಥ್‌ ಪ್ರಶ್ನೆ ಮಾಡಿದ್ದಾರೆ.

ಆರ್‌ಎಸ್‌ಎಸ್‌ , ಬಿಜೆಪಿಯವರು ಲಾಭಕ್ಕಾಗಿ ಮಾಡುತ್ತಿದ್ದಾರೆ ಅನ್ನುವುದರಲ್ಲಿ ಅರ್ಥ ಇಲ್ಲ. ಅವರೂ ಸಮಾಜದ ಪರ ನಿಂತಿದ್ದಾರೆ. ಕುರುಬರ ಹೋರಾಟವನ್ನು ಬಿಜೆಪಿ ಹೈಜಾಕ್ ಮಾಡುತ್ತಿದೆ ಎನ್ನುವ ಸಿದ್ದರಾಮಯ್ಯ, ಸ್ವಾತಂತ್ರ್ಯ ಹೋರಾಟವನ್ನ ಕಾಂಗ್ರೆಸ್ ಹೈಜಾಕ್ ಮಾಡಿತ್ತು ಅನ್ನುತ್ತಾರಾ? ಹಾಗೆ ಹೇಳಲಿ ನೋಡೋಣ ಅಂತ ದೆಹಲಿಯಲ್ಲಿ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES