Wednesday, October 2, 2024

ಕ್ಷುಲ್ಲಕ ಕಾರಣಕ್ಕೆ ಜಗಳ; ಅಮ್ಮ ಮಗಳಿಂದ ಹತ್ಯೆಯಾದ ನೆರೆಮನೆಯ ವ್ಯಕ್ತಿ

ಚಾಮರಾಜನಗರ : ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ  ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ತಾಯಿ ಮಗಳಿಬ್ಬರು ಸೇರಿ ವ್ಯಕ್ತಿಯೊಬ್ಬನ ಹತ್ಯೆ ಮಾಡಿದ್ದು. ಕೊಳ್ಳೇಗಾಲ ಪಟ್ಟಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಳ್ಳೇಗಾಲದ ಮುಡಿಗುಂಡಂ ನಿವಾಸಿ ಮಹದೇವಸ್ವಾಮಿ (30)ಕೊಲೆಯಾದ ದುರ್ದೈವಿ. ಕ್ಷುಲ್ಲಕ ಕಾರಣಕ್ಕೆ ನೆರೆ ಮನೆಯವರೊಂದಿಗೆ ಗಲಾಟೆಯಾಗಿದ್ದು ನೆರೆಯ ಮನೆ ನಿವಾಸಿಗಳಾದ ಚಂದ್ರಮ್ಮ ಮತ್ತುಆಕೆಯ ಮಗಳು ಪ್ರೀತಿ  ಕಲ್ಲು ಮತ್ತು ಇಟ್ಟಿಗೆಯಿಂದ ಹಲ್ಲೆ ಮಾಡಿ  ಮಹದೇವಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ.

ಹಲ್ಲೆ ಬಳಿಕ ವ್ಯಕ್ತಿಯನ್ನು ಕೊಳ್ಳೇಗಾಲದ  ಆಸ್ಪತ್ರೆಗೆ  ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಮಹದೇವಸ್ವಾಮಿ ಸಾವನ್ನಪ್ಪಿದ್ದಾನೆ . ಕೊಳ್ಳೇಗಾಲ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಕವಿತಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ .

 

RELATED ARTICLES

Related Articles

TRENDING ARTICLES