Thursday, May 9, 2024

ಕುಮಾರಣ್ಣ.. ನೀನೊಬ್ಬ ನಾಡ ದ್ರೋಹಿ : ಡಿ.ಕೆ. ಶಿವಕುಮಾರ್

ಬೆಂಗಳೂರು : ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರ ಈಗ ಕೊಟ್ಟಿರುವ ಬರ ಪರಿಹಾರವೇ ಸಾಕು ಬಿಡಿ ಅಂತಿದ್ದಾರೆ. ಏನು ಅವರ ಮನೆ ಆಸ್ತಿ ಕೇಳ್ತಿದ್ದೀವಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ.. ನೀನೊಬ್ಬ ನಾಡ ದ್ರೋಹಿ. ಘೋರ ಅನ್ಯಾಯ ಆಗಿದೆ. ಬಿಜೆಪಿಯರೆಲ್ಲಾ ಸುಮ್ಮನೆ ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನ್ಯಾಯಾಲಯ ಹೇಳ್ತು. ನೀನು ಕೊಡಿ ಅಂತ ಹೇಳಿಲ್ಲ. ನೀವು ಚೊಂಬು ಕೊಟ್ರಿ ಅಂತ ನಾವು ಹೇಳಿದ್ವಿ. ಅದಕ್ಕೆ ದೊಡ್ಡ ವ್ಯಾಖ್ಯಾನ ಮಾಡಿದ್ರು. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಜೆಟ್ ನಲ್ಲಿ ಪಾಸ್ ಮಾಡಿದ್ದಾರೆ. ಆದ್ರೂ ರಾಜ್ಯಕ್ಕೆ ಕೊಡಲಿಲ್ಲ ಅಲ್ವಾ? ಅದಕ್ಕೆ ಏನು ಹೇಳ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ನಿಮ್ಮದು ರೈತರ ಮಕ್ಕಳ ಪಾರ್ಟಿ ಅಲ್ವೇ?

ಮಹದಾಯಿ ನ್ಯಾಷನಲ್ ಯೋಜನೆ ಮಾಡ್ತೀವಿ ಅಂದ್ರು, ಯಾಕೆ ಮಾಡಲಿಲ್ಲ. ಮೇಕೆದಾಟು ಬಗ್ಗೆ ಕುಮಾರಸ್ವಾಮಿ ಮಾತಾಡಿದ್ರು. ನಿಮ್ಮದು ರೈತರ ಮಕ್ಕಳ ಪಾರ್ಟಿ ಅಲ್ವೇ? ನೀವು ಹೋಗಿ ಮಾತಾಡಬೇಕಿತ್ತು. ನಾವು ಮಾಡಿದ ಯೋಜನೆ, ಹೋರಾಟಕ್ಕೆ ಈಗ ಮಾತಾಡ್ತೀರಾ? ಗೆದ್ರೆ ಒಂದೇ ದಿನದಲ್ಲಿ ಮಾಡ್ತೀನಿ ಅಂತಾರೆ ಎಂದು ಚಾಟಿ ಬೀಸಿದ್ದಾರೆ.

ನಾವು ಕೇಳಿದ್ದು 18 ಸಾವಿರ ಕೋಟಿ

ಅಧಿಕಾರ ಕೊಟ್ರೆ ಮಾತ್ರ ಇವರಿಗೆ ರಾಜ್ಯದ ಹಿತ, ಇಲ್ಲ ಅಂದ್ರೆ ಇಲ್ಲ. ಕೇಂದ್ರದಿಂದ ಕೊಟ್ಟಿರುವ ಬರ ಪರಿಹಾರ ನಮಗೆ ಒಪ್ಪಿಗೆ ಇಲ್ಲ. ನಾವು ಕೇಳಿದ್ದು 18 ಸಾವಿರ ಕೋಟಿ, ಇವ್ರು ಚಿಲ್ಲರೆ ಕೊಟ್ಟಿದ್ದಾರೆ. ನಾಳೆ ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಪ್ರೊಟೆಸ್ಟ್ ಮಾಡ್ತೀವಿ. ಬೆಂಗಳೂರಿನ ಎಲ್ಲಾ ಶಾಸಕರು ಬರ್ತಾರೆ. ಎಲ್ಲಾ ಶಾಸಕರು, ಮಂತ್ರಿಗಳು ಭಾಗಿಯಾಗ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES