ಉಡುಪಿ: ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿದ ಪರಿಣಾಮ ಮನೆ ಮಾಲೀಕನಿಗೆ ದಿಕ್ಕು ತೋಚದೆ ದೇವಸ್ಥಾನ ಗಂಟೆ ಬಾರಿಸಿ ಜನರನ್ನು ಒಟ್ಟುಗೂಡಿಸಿದ ಅಪರೂಪದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದಲ್ಲಿ ನಡೆದಿದೆ.
ಮನೆಗೆ ಬೆಂಕಿ ಬಿದ್ದಿದೆ ಎಂದು ತಿಳಿಯುತ್ತಿದ್ದಂತೆ ವಿಚಲಿತನಾಗಿ ರಾತ್ರಿ ಹೊತ್ತು ದೇವಸ್ಥಾನದ ಕರೆ ಘಂಟೆಯನ್ನು ನಿರಂತರವಾಗಿ ಬಾರಿಸಿದ್ದಾನೆ. ದೇವಸ್ಥಾನದ ಗಂಟೆ ಶಬ್ದಕ್ಕೆ ಸ್ಥಳೀಯರು, ಅಕ್ಕ ಪಕ್ಕ ಮನೆಯವರು ಏನಾಯಿತು? ಎಂಬ ಗಾಬರಿಯಿಂದ ಓಡೋಡಿ ಬಂದು ದೇವಸ್ಥಾನದ ಬಾಗಿಲ ಬಳಿ ಜಮಾಯಿಸಿದ್ದಾರೆ.
ಇದನ್ನೂ ಓದಿ: ಮೆಡಿಕಲ್ ಕಾಲೇಜು ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ
ಕೊನೆಗೆ ವಿಚಾರಿಸಿದ ಬಳಿಕ ಅತನ ಮನೆಗೆ ಬೆಂಕಿ ಬಿದ್ದಿರುವ ಮಾಹಿತಿ ಹಂಚಿಕೊಂಡಿದ್ದಾನೆ. ಬಳಿಕ ಸ್ಥಳೀಯರು ತೆರಳಿ ಮನೆಗೆ ಬಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಸ್ಮಿಕ ಬೆಂಕಿ ಘಟನೆಯಿಂದ ಓರ್ವ ವೃದ್ದೆ ಹಾಗೂ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.