ಶಿವಮೊಗ್ಗ : ಕುಮಾರಸ್ವಾಮಿ ಅವರು, ಅಲ್ಲಾ ಕುಮಾರಣ್ಣ. ಹೆಣ್ಣು ಮಕ್ಕಳು ಕುಮಾರಣ್ಣ ಅಂತಾರೆ. ಅವರು ಅಣ್ಣ ಕುಮಾರಣ್ಣ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಕ್ಕಳ ನಮ್ಮ ಸಂಸ್ಕೃತಿ. ಹೆಣ್ಣು ಮಕ್ಕಳು ನಮ್ಮ ಕುಟುಂಬದ ಕಣ್ಣು. ಅವರು ಬದುಕು ಕಟ್ಟಿಕೊಳ್ಳಲಿ ಅಂತ ಈ ಗ್ಯಾರಂಟಿ ಯೋಜನೆ ಕೊಟ್ರೆ, ಕುಮಾರಣ್ಣ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಬೇಸರಿಸಿದರು.
ಕುಮಾರಣ್ಣ ನೀವು ಮಾಜಿ ಪ್ರಧಾನಿ ಮಗ. ನೀವು ಮಾಜಿ ಸಿಎಂ, ಹಾಲಿ ಶಾಸಕ. ನಿಮ್ಮ ಮನೆಯಲ್ಲಿ ಎಂಪಿ, ಶಾಸಕ ಇದ್ದಾರೆ. ಗ್ಯಾರಂಟಿಯಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅಂತೀದ್ದೀರಲ್ಲ. ಇಡೀ ಮನಕುಲಕ್ಕೆ ಅವಮಾನ ಆಗಿದೆ. ಇದರಿಂದ ಜನ ರೊಚ್ಚಿಗೆದ್ದಿದ್ದಾರೆ ಎಂದು ಹೇಳಿದರು.
ಆರಗ ಜ್ಞಾನೇಂದ್ರಗೆ ಜ್ಞಾನವೇ ಇಲ್ಲ
ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ನಮ್ಮನ್ನ ಗೆಲ್ಲಿಸಿದ್ದಾರೆ. ಅಲ್ಲಣ್ಣ.. ಅತ್ತೆ ಸೊಸೆಗೆ ತಂದಿಟ್ಟಿದ್ದೀರಾ ಅಂದ್ರು. ಯಾರ್ಯಾರು ಜಗಳ ಆಡಿದ್ದಾರೆ. ಆರಗ ಜ್ಞಾನೇಂದ್ರ 420 ಅಂತ ಹೇಳಿದ್ರು. ಆರಗ ಜ್ಞಾನೇಂದ್ರಗೆ ಜ್ಞಾನವೇ ಇಲ್ಲ, ಅವರು ಅಜ್ಞಾನಿ ಎಂದು ವಾಗ್ದಾಳಿ ನಡೆಸಿದರು.
KRSಗೆ ಅಡ್ಡ ಮಲಗಿಸಿಬಿಡ್ತೀನಿ ಅಂದಿದ್ರಿ
ಕುಮಾರಣ್ಣ ನೀವು, ಸುಮಲತಾ ಅವರನ್ನು ಕೆಆರ್ಎಸ್ಗೆ ಅಡ್ಡ ಮಲಗಿಸಿಬಿಡ್ತೀನಿ ಅಂತ ಹೇಳಿದ್ರಿ. ಇವಾಗ ಆ ಹೆಣ್ಣು ಮಗಳ ಮನೆಗೆ ಹೋಗಿದ್ದಾರೆ. ಹೂವಿನ ಬೊಕ್ಕೆ ಇಟ್ಟುಕೊಂಡು ಸುಮಲತಾ ಮನೆಗೆ ಹೋಗ್ತಾ ಇದ್ದಾರೆ ಎಂದು ಡಿ.ಕೆ. ಶಿವಕುಮಾರ್ ಚಾಟಿ ಬೀಸಿದರು.