ಕೋಲಾರ: ನ್ಯಾಯ್ ಪತ್ರ ಪ್ರಣಾಳಿಕೆ ಈಡೇರಿಸಲು ಕಾಂಗ್ರೆಸ್ ಬದ್ದವಾಗಿರುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕುರುಡುಮಲೆ ಗಣಪನ ಸನ್ನಿಧಾನದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಕೊಟ್ಟಿರುವ ‘ನ್ಯಾಯ್ ಪತ್ರ’ ದ ಪ್ರಣಾಳಿಕೆ ಸತ್ಯ.ಯೋಜನೆಗಳ ಗ್ಯಾರೆಂಟಿ ನಿಶ್ಚಿತ, ಕಾಂಗ್ರೆಸ್ ಗೆಲುವು ಖಚಿತ.ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯದ ವಿಶ್ವಾಸವಿದೆ ಎಂದರು.
ನಾವು ಎಲ್ಲಾ ಭರವಸೆಗಳನ್ನು ಈಡೇರಿಸಲು ಶಕ್ತಿ ನೀಡುವಂತೆ ಕುರುಡುಮಲೆ ಗಣಪನ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದೇನೆ ಎಂದರು.