Thursday, May 9, 2024

ನರೇಂದ್ರ ಮೋದಿ ಅವರ ಕಾರ್ಯವೈಖರಿ ನನಗೆ ಪ್ರೇರಣೆ,ಅದಕ್ಕಾಗಿ ನಾನು ಬಿಜೆಪಿ ಬೆಂಬಲಿಸುವೆ: ಸುಮಲತಾ ಅಂಬರೀಶ್​

ಬೆಂಗಳೂರು: ನರೇಂದ್ರ ಮೋದಿ ಅವರ ಕಾರ್ಯವೈಖರಿ ನನಗೆ ಪ್ರೇರಣೆ,ವಿಕಸಿತ ಭಾರತ ಕನಸು ನನಸಾಗಬೇಕು,ಅದಕ್ಕೆ ನಾನು ಬಿಜೆಪಿ ಬೆಂಬಲಿಸುವೆ ಎಂದು ಸುಮಲತಾ ಅಂಬರೀಶ್​ ಹೇಳಿದ್ದಾರೆ. 

ಪಕ್ಷ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್​, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ನನಗೆ ಪ್ರೇರಣಾದಾಯಕವಾಗಿದೆ. ಪ್ರಧಾನಿ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ. ಅವರ ವಿಕಸಿತ ಭಾರತ ಕನಸು ನನಸಾಗಬೇಕು. ಅದಕ್ಕೆ ನಾನು ಬೆಂಬಲಿಸುವೆ ಎಂದರು.

ನನ್ನ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕು

ಮುಖ್ಯವಾಗಿ ನನ್ನ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕು. ಮತ್ತು ಸಂಸತ್ತಿನಲ್ಲಿ ಹಿರಿಯ ಬಿಜೆಪಿ ನಾಯಕರು ನನಗೆ ಮಾರ್ಗದರ್ಶನ ಮಾಡಿದರು. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು, ತಮ್ಮ ಅವಧಿಯಲ್ಲಿ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಈ ಎಲ್ಲ ಕಾರಣದಿಂದ ನಾನು ಬಿಜೆಪಿ ಸೇರಿದ್ದೇನೆ ಎಂದರು.

ಅಂದು ಪಕ್ಷೇತರವಾಗಿ ನಿಂತಾಗ ಚುನಾವಣೆಯಲ್ಲಿ ಮೋದಿ ಅವರು ನನ್ನ ಪ್ರಚಾರ ಮಾಡಿದ್ದರು ಅದನ್ನ ಎಂದಿಗೂ ಮರೆಯೋದಿಲ್ಲ.ಸಂಸದಳಾಗಿ ಸಾಕಷ್ಟು‌ ಕಲಿತಿದ್ದೇನೆ.ಸದಾನಂದಗೌಡರು ಹಿರಿಯರು ಅವರಿಂದ ಸಾಕಷ್ಟು ಸಹಕಾರ ಸಿಕ್ಕಿದೆ ಅವರ‌ ಮಾರ್ಗದರ್ಶನ‌ ಸಿಕ್ಕಿದೆ ಬಿಜೆಪಿ ಸೇರ್ಪಡೆ ಉತ್ತಮ ಎಂದು ಅನಿಸಿತ್ತು ಎಂದರು.

ಮೋದಿ ಅವರ ಭಾಷಣ ದಿಂದ‌ ಸ್ಪೂರ್ತಿ ಸಿಕ್ಕಿದೆ
ಯಡಿಯೂರಪ್ಪ ಅವರು‌ ಸಿಎಂ ಆಗಿದ್ದಾಗ ಸಾಕಷ್ಟು ಸಹಕಾರ ‌ಕೊಟ್ಟಿದ್ದರು.ಸಿಎಂ ಆಗಿದ್ದಾಗ ಚಾರ್ಜ್ ತೆಗೆದುಕೊಂಡ ಮೊದಲ ದಿನವೇ‌ಕೇಳಿದ್ರು ಮಂಡ್ಯದಲ್ಲಿ ನಿಮಗೆ ಯಾವ ರೀತಿ‌ ಸಹಕಾರ‌ಬೇಕು‌ ಎಂದು ಕೇಳಿದ್ರು
ಮೈ ಶುಗರ್ ಉದ್ಘಾಟನೆ ಮಾಡಿಸಿಕೊಟ್ಟರು.ಉದ್ಘಾಟನೆ ಆದ ನಂತರ ಮತ್ತೆ ಉದ್ಘಾಟನೆ ಮಾಡುವ ಮೂಲಕ ಅದರ ಕ್ರೆಡಿಟ್ ತೆಗೆದುಕೊಳ್ಳಲು ಅನೇಕರು ಮುಂದಾದರು.ಅದ್ರೆ ಎಲ್ಲಾ ಕ್ರೆಡಿಟ್​ ಬಿಜೆಪಿಗೆ ಸಲ್ಲುತ್ತದೆ ಎಂದರು. ನನ್ನ‌ ಭವಿಷ್ಯಕ್ಕಿಂತ ನನ್ನ ಜಿಲ್ಲೆ,‌ರಾಜ್ಯ ಮುಖ್ಯ ‌ಎಂದು ಅರಿತಿದ್ದೇನೆ ಹೀಗಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.

RELATED ARTICLES

Related Articles

TRENDING ARTICLES