ಬೆಂಗಳೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಈ ವರ್ಷ ಶತ್ರುಗಳಿಂದ ತೊಂದರೆ ಹಾಗೂ ಅನಾರೋಗ್ಯ ಬಾಧೆ ಉಂಟಾಗಲಿದೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕ್ರೋಧಿ ನಾಮ ಸಂವತ್ಸರದ ವಿಶೇಷತೆ ಹಾಗೂ ಸಂವತ್ಸರದ ಫಲಗಳ ಬಗ್ಗೆ ಅವರು ಪವರ್ ಟಿವಿಗೆ ಮಾಹಿತಿ ನೀಡಿದ್ದು, ನಟ ದರ್ಶನ್ ಅವರಿಗೆ ಹೆಚ್ಚು ಅನಾಹುತಗಳು ಕಾದಿವೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟರಾದ ದರ್ಶನ್ ತೂಗುದೀಪ ಅವರು ಬಹಳ ಕಷ್ಟದಿಂದ ಮೇಲೆ ಬಂದಿದ್ದಾರೆ. ಅವರ ಪ್ರತಿಭೆ, ಅವರು ಪಡೆದಿರುವ ಪ್ರಖ್ಯಾತಿ ಹಾಗೂ ಅವರು ಸಂಪಾಧಿಸಿರುವ ಅಭಿಮಾನಿ ಬಳಗ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀಗಳು ಮನದುಂಬಿ ಶ್ಲಾಘಿಸಿದ್ದಾರೆ.
ಆದರೆ, ಈ ವರ್ಷ ನಟ ದರ್ಶನ್ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ ಉಂಟಾಗಲಿದೆ. ದರ್ಶನ್ ಅವರಿಗೆ ಅನಾರೋಗ್ಯ ಬಾಧೆ ಕಾಡಲಿದೆ. ಮಾನಹಾನಿಗಳು, ಅನೇಕ ರೀತಿಯ ದುಷ್ಕೃತ್ಯಗಳ ಪ್ರಯೋಗದಿಂದ ದರ್ಶನ್ ಅವರ ನೆಮ್ಮದಿ ಹಾಳಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ರಕ್ಷಣಾವಲಯ ಹೆಚ್ಚು ಮಾಡಿಕೊಳ್ಳಿ
ಆದ್ದರಿಂದ, ನಟ ದರ್ಶನ್ ಅವರು ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಮತ್ತು ನಿಮ್ಮ ರಕ್ಷಣಾವಲಯವನ್ನು ಹೆಚ್ಚು ಮಾಡುವುದು ಸೂಕ್ತ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.