ಬೆಂಗಳೂರು: ಲೋಕ ಸಭೆ ಚುನಾವಣೆಗೆ ಕರ್ನಾಟಕದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.ಎರಡು ಹಂತದಲ್ಲಿ ಮತದಾನ ನಡೆಯಲಿದ್ದು,ಯಾವ ಕ್ಷೇತ್ರದಲ್ಲಿ ಯಾರ ವಿರುದ್ಧ ಯಾರು ಸ್ಪರ್ಧಿಸುತ್ತಿದ್ದಾರೆ. ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟದಲ್ಲಿ 2 ಹಂತದ ಮತದಾನ
ಮೊದಲ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ. ಈಗಾಗಲೇ ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏ.4 ಇರಲಿದೆ. ನಾಮಪತ್ರ ಹಿಂಪಡೆಯುವ ಕೊನೆ ದಿನ ಏ.8 ಆಗಿದೆ.
ಕ್ರ.ಸಂ | ಕ್ಷೇತ್ರಗಳು | ಎನ್ಡಿಎ ಒಕ್ಕೂಟ | ಕಾಂಗ್ರೆಸ್ ಪಕ್ಷ |
1 | ಉಡುಪಿ-ಚಿಕ್ಕಮಗಳೂರು | ಕೋಟಾ ಶ್ರೀನಿವಾಸ ಪೂಜಾರಿ | ಜಯಪ್ರಕಾಶ್ ಹೆಗ್ಡೆ |
2 | ಹಾಸನ | ಪ್ರಜ್ವಲ್ ರೇವಣ್ಣ (ಜೆಡಿಎಸ್) | ಶ್ರೇಯಸ್ ಪಟೇಲ್ |
3 | ದಕ್ಷಿಣಕನ್ನಡ | ಕ್ಯಾ.ಬ್ರಿಜೇಶ್ ಚೌಟಾ | ಪದ್ಮರಾಜ್ |
4 | ಚಿತ್ರದುರ್ಗ | ಗೋವಿಂದ ಕಾರಜೋಳ | ಬಿ ಎನ್ ಚಂದ್ರಪ್ಪ |
5 | ತುಮಕೂರು | ವಿ. ಸೋಮಣ್ಣ | ಎಸ್.ಪಿ. ಮುದ್ದಹನುಮೇಗೌಡ |
6 | ಮಂಡ್ಯ | ಹೆಚ್.ಡಿ. ಕುಮಾರಸ್ವಾಮಿ (ಜೆಡಿಎಸ್) | ವೆಂಕಟರಾಮೇಗೌಡ (ಸ್ಟಾರ್ ಚಂದ್ರು) |
7 | ಮೈಸೂರು | ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ | ಎಂ. ಲಕ್ಷ್ಮಣ್ |
8 | ಚಾಮರಾಜನಗರ | ಎಸ್. ಬಾಲರಾಜು | ಸುನಿಲ್ ಬೋಸ್ |
9 | ಬೆಂಗಳೂರು ಗ್ರಾಮಾಂತರ | ಡಾ.ಸಿ.ಎನ್. ಮಂಜುನಾಥ್ | ಡಿ.ಕೆ. ಸುರೇಶ್ |
10 | ಬೆಂಗಳೂರು ಉತ್ತರ | ಶೋಭಾ ಕರಂದ್ಲಾಜೆ | ಪ್ರೊ.ರಾಜೀವ್ ಗೌಡ |
11 | ಬೆಂಗಳೂರು ಕೇಂದ್ರ | ಪಿ.ಸಿ. ಮೋಹನ್ | ಮನ್ಸೂರ್ ಖಾನ್ |
12 | ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ | ಸೌಮ್ಯ ರೆಡ್ಡಿ |
13 | ಚಿಕ್ಕಬಳ್ಳಾಪುರ | ಡಾ. ಸುಧಾಕರ್ | ರಕ್ಷಾ ರಾಮಯ್ಯ |
14 | ಕೋಲಾರ | ಮಲ್ಲೇಶ್ ಬಾಬು (ಜೆಡಿಎಸ್) | ಕೆ.ವಿ.ಗೌತಮ್ |
15 | ಚಿಕ್ಕೋಡಿ | ಅಣ್ಣಾ ಸಾಹೇಬ್ ಜೊಲ್ಲೆ | ಪ್ರಿಯಾಂಕಾ ಜಾರಕಿಹೊಳಿ |
16 | ಬೆಳಗಾವಿ | ಜಗದೀಶ್ ಶೆಟ್ಟರ್ | ಮೃಣಾಲ್ ಹೆಬ್ಬಾಳ್ಕರ್ |
17 | ಬಾಗಲಕೋಟೆ | ಪಿ.ಸಿ. ಗದ್ದಿಗೌಡರ | ಸಂಯುಕ್ತ ಪಾಟೀಲ್ |
18 | ವಿಜಯಪುರ | ರಮೇಶ್ ಜಿಗಜಿಣಗಿ | ರಾಜು ಅಲಗೋರ್ |
19 | ಕಲಬುರಗಿ | ಉಮೇಶ್ ಜಾಧವ್ | ಡಾ. ರಾಧಾಕೃಷ್ಣ ದೊಡ್ಡಮನಿ |
20 | ರಾಯಚೂರು | ರಾಜಾ ಅಮರೇಶ್ವರ್ ನಾಯಕ್ | ಕುಮಾರ್ ನಾಯ್ಕ್ |
21 | ಬೀದರ್ | ಭಗವಂತ ಖೂಬಾ | ಸಾಗರ್ ಖಂಡ್ರೆ |
22 | ಕೊಪ್ಪಳ | ಡಾ. ಬಸವರಾಜ ಕ್ಯಾವಟೂರ್ | ರಾಜಶೇಖರ್ ಹಿಟ್ನಾಳ್ |
23 | ಬಳ್ಳಾರಿ | ಶ್ರೀರಾಮುಲು | ಇ. ತುಕರಾಂ |
24 | ಹಾವೇರಿ | ಬಸವರಾಜ ಬೊಮ್ಮಾಯಿ | ಅನಂದ್ಸ್ವಾಮಿ ಗಡ್ಡದೇವರಮಠ |
25 | ಧಾರವಾಡ | ಪ್ರಹ್ಲಾದ್ ಜೋಶಿ | ವಿನೋದ್ ಅಸೂಟಿ |
26 | ಉತ್ತರಕನ್ನಡ | ವಿಶ್ವೇಶ್ವರ ಹೆಗೆಡೆ ಕಾಗೇರಿ | ಅಂಜಲಿ ನಿಂಬಾಳ್ಕರ್ |
27 | ದಾವಣಗೆರೆ | ಗಾಯತ್ರಿ ಸಿದ್ದೇಶ್ವರ | ಪ್ರಭಾವತಿ ಮಲ್ಲಿಕಾರ್ಜುನ್ |
28 | ಶಿವಮೊಗ್ಗ | ಬಿ.ವೈ. ರಾಘವೇಂದ್ರ | ಗೀತಾ ಶಿವರಾಜ್ಕುಮಾರ್ |
ಒಟ್ಟಿನಲ್ಲಿ ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಎಲ್ಲ ಅಭ್ಯರ್ಥಿಗಳು ಮತಬೇಟೆ ಆರಂಭಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನಡೆಯಲಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ