ಬೆಂಗಳೂರು:’ಕೈ’ ನಾಯಕ ರಾಹುಲ್ಲಾ, ಏನಿಲ್ಲ ಏನಿಲ್ಲ ಎಂದು ಕರಿಮಣಿ ಮಾಲೀಕ ಹಾಡಿನ ಮೂಲಕ ರಾಹುಲ್ ಗಾಂಧಿಗೆ ವಿಪಕ್ಷ ನಾಯಕ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಬಿಟ್ಟು, ಬೇರೆ ಯಾರು ಇಲ್ವಾ ನಿಮಗೆ ಹೇಳೋಕೆ ಅಂತಾರೆ ಸಿದ್ದರಾಮಯ್ಯನವರೇ ನಮಗೆ ದೇಶದಲ್ಲಿ ಒಬ್ಬರೇ ಪ್ರಧಾನಿ ಅವರೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಕಾಂಗ್ರೆಸ್ ನಾಯಕ ರಾಹುಲ್ಲಾ, ಏನಿಲ್ಲ ಏನಿಲ್ಲ ರಾಹುಲಾ…? ಎಂದು ಕರಿಮಣಿ ಮಾಲೀಕ ಹಾಡಿನ ಮೂಲಕ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಅನುಭವಿಸ್ತಿದ್ದೇವೆ. ಸರ್ಕಾರದ ಬಳಿ ಬೋರ್ ವೆಲ್ ಕೊರಿಸೋಕು ನೀರಿಲ್ಲ. ರಾಜ್ಯದಲ್ಲಿ ಬರ ನಿಭಾಯಿಸುವಲ್ಲಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾಡಿಲ್ಲ
ನಿಮ್ಮ 2೦೦೦ ರೂಪಾಯಿ ಯಾವುದಕ್ಕೆ ಆಗುತ್ತದೆ, ಜನರು ಗೋಳು ಆಡುತ್ತಿದ್ದಾರೆ.ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿಬಿಟ್ಟಿದೆನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ವಿದೇಶ ಚಾನೆಲ್ನಲ್ಲೂ ಬೆಂಗಳೂರಿನ ಮರ್ಯಾದೆ ಹೋಗ್ತಿದೆ. ನೀರಿನ ಸಮಸ್ಯೆ ಇದೆ ಅಲ್ಲಿಗೆ ಯಾರು ಹೋಗಬೇಡಿ ಅಂತಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಜೋಡಿಯಿಂದಲೇ ನೀರಿನ ಸಮಸ್ಯೆ ಆಗಿದೆ.ಇಂತಹ ಕೆಟ್ಟ ಸರ್ಕಾರವನ್ನು ತೊಲಗಿಸಬೇಕಿದೆ. ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ರಾಜ್ಯದಲ್ಲಿ 28ಕ್ಕೆ 28ಸ್ಥಾನ ಗೆಲ್ಲುವಂತಹ ಕೆಲಸ ಮಾಡೋಣ. ದೇಶದಲ್ಲಿ ಮೋದಿ ಗ್ಯಾರಂಟಿ ಒಂದೇ, ಕಾಂಗ್ರೆಸ್ಸಿನ ಗ್ಯಾರಂಟಿ ಪೊಳ್ಳು ಮತ್ತೆ ನೀರಿನ ಮೇಲೆ ಗುಳ್ಳೆ ಇದ್ದಂತೆ ಎಂದು ಕಿಡಿಕಾರಿದ್ದರು.