Friday, May 10, 2024

ನ್ಯೂಇಯರ್​ ಪಾರ್ಟಿಗೆ ಹೋಗಲು ಬಿಡದ್ದಕ್ಕೆ ಮನ ನೊಂದು ಯುವಕ ಆತ್ಮಹತ್ಯೆ!

ಬೆಳಗಾವಿ: ಹೊಸ ವರ್ಷದ ಪಾರ್ಟಿಗೆ ಹೋಗಲು ಬಿಡದ್ದಕ್ಕೆ ಮನ ನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಣಬರ್ಗಿ ಗ್ರಾಮದಲ್ಲಿ ಘಟನೆ ನಡೆದಿದೆ. 

ಸಿದ್ದರಾಯ ಶಿಗಿಹಳ್ಳಿ (24) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ.

ಸಿದ್ದರಾಯ ಸ್ನೇಹಿತರ ಜೊತೆಗೆ ಹೊಸ ವರ್ಷದ ಪಾರ್ಟಿ ಮಾಡಲು ಯೋಜನೆ ರೂಪಿಸಿದ್ದ. ಆದರೆ, ಪಾರ್ಟಿ ಬೇಡ, ಮನೆಯಲ್ಲಿರು ಎಂದು ಕುಟುಂಬಸ್ಥರು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: ವರ್ಷದ ಮೊದಲ ದಿನವೇ ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ 

ಯುವಕನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಯುವತಿಯೊಬ್ಬಳು ಹೊಸ ವರ್ಷದ ಪಾರ್ಟಿಗೆ  ಹೋಗಲು ಅವಕಾಶ ನೀಡದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಇತ್ತ ಬೆಳಗಾವಿಯಲ್ಲೂ ಯುವಕನೊಬ್ಬ ಕೂಡಾ ಇದೇ ಕಾರಣಕ್ಕೆ ಮನ ನೊಂದು ಪ್ರಾಣ ಕಳೆದುಕೊಂಡಿರುವುದು ಎಂತಹ ವಿಪರ್ಯಾಸ.

RELATED ARTICLES

Related Articles

TRENDING ARTICLES