Thursday, May 9, 2024

ಲವರ್ ಮಾತು ಕೇಳಿ ಪತಿ ಮೊಬೈಲ್​ನಿಂದ RDX ಬಾಂಬ್ ಬೆದರಿಕೆ ಮೆಸೇಜ್

ಬೆಂಗಳೂರು : ಪತಿ ಹಾಗೂ ಪತ್ನಿ ನಡುವೆ ನಡೆದ ಜಗಳವು ಬೆದರಿಕೆ ಮೆಸೇಜ್ ಕಳುಹಿಸುವಷ್ಟರ ಮಟ್ಟಕ್ಕೆ ಬೆಳೆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.

ಪತ್ನಿಯೊಬ್ಬಳು ಲವರ್ ಮಾತು ಕೇಳಿ ತನ್ನ ಪತಿ ಮೊಬೈಲ್‍ನಿಂದ ಆರ್​ಡಿಎಕ್ಸ್​ ಬಾಂಬ್ ಬೆದರಿಕೆ ಮೆಸೇಜ್ ಮಾಡಿದ್ದಾಳೆ. ವಿದ್ಯಾರಾಣಿ ಎಂಬಾಕೆಯೇ ಈ ರೀತಿ ಎಡವಟ್ಟು ಮಾಡಿರುವ ಮಹಿಳೆ.

ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ಆನೇಕಲ್‍ನ ಮಾರುತಿ ಬಡಾವಣೆಯಲ್ಲಿ ವಾಸವಿದ್ದರು. ಈ ನಡುವೆ ವಿದ್ಯಾರಾಣಿಗೆ ಸೋಷಿಯಲ್ ಮೀಡಿಯಾ ಆಪ್ ಮೂಲಕ ರಾಮ್‍ಪ್ರಸಾದ್ ಅನ್ನೋ ವ್ಯಕ್ತಿಯ ಪರಿಚಯವಾಗುತ್ತೆ. ಅಂತೆಯೇ ರಾಮ್‍ಪ್ರಸಾದ್ ಜೊತೆ ವಿದ್ಯಾರಾಣಿ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು. ಈ ವಿಚಾರ ಪತಿ ಕಿರಣ್‍ಗೆ ಗೊತ್ತಾಗಿ ಮೊಬೈಲ್ ಹೊಡೆದು ಹಾಕಿದ್ದ.

ಇದನ್ನು ಬೇರೆ ನಂಬರ್ ಮೂಲಕ ರಾಮ್‍ಪ್ರಸಾದ್‍ಗೆ ವಿದ್ಯಾರಾಣಿ ತಿಳಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಪ್ರಿಯಕರ ರಾಮ್ ಪ್ರಸಾದ್, ವಿದ್ಯಾರಾಣಿ ಗಂಡನಿಗೆ ಬುದ್ಧಿ ಕಲಿಸಲು ಪ್ಲಾನ್ ಮಾಡಿದ್ದ. ಅಂತೆಯೇ ನಾನು ಕಳುಹಿಸುವ ಮೆಸೇಜ್‍ನ ಗಂಡನ ನಂಬರ್‍ನಿಂದ ಫಾರ್ವರ್ಡ್ ಮಾಡು ಅಂತ ಸೂಚನೆ ಕೊಟ್ಟಿದ್ದನು. ಇಂದು ಆರ್​ಡಿಎಕ್ಸ್​ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕುವ ಮೆಸೇಜ್ ಅನ್ನು ಕಿರಣ್ ನಂಬರ್‍ನಿಂದ ತನಿಖಾ ಸಂಸ್ಥೆಗಳಿಗೆ ರವಾನಿಸುವಂತೆ ಹೇಳುತ್ತಾನೆ. ಪ್ರಿಯಕರನ ಮಾತನ್ನು ನಂಬಿದ ವಿದ್ಯಾರಾಣಿ ಖುದ್ದು ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಳು. ಬಳಿಕ ಗಂಡನ ಮೊಬೈಲ್‍ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು.

RELATED ARTICLES

Related Articles

TRENDING ARTICLES