Friday, May 10, 2024

ನೂತನ ಸರ್ಕಾರದ ಶಾಸಕರ ಶಾರ್ಟ್ ಲಿಸ್ಟ್ ರೆಡಿ ; ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು: ಅಂತೂ ಇಂತೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್‌ ಅವರನ್ನು ಉಪಮುಖ್ಯಮಂತ್ರಿಯಾಗಿ ಕೈ ಹೈಕಮಾಂಡ್​ ಘೋಷಣೆ ಮಾಡಿದ್ದು, ಆಯ್ತು ಅಂದರೆ ಇದೀಗ ಕ್ಯಾಬಿನೆಟ್‌ ರಚನೆಗೆ ಸಚಿವರನ್ನು ನೇಮಕ ಮಾಡಲು ಕೈ ಹೈಕಮಾಂಡ್‌ಗೆ ತಲೆನೋವಾಗಿದೆ.

ಹೌದು,ನಾಳೆ ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಕಲಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ 2ನೇ ಬಾರಿಗೆ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಗೆದ್ದಿದ್ದು, ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದಾರೆ. ಕಾಂಗ್ರೆಸ್​ ಪಕ್ಷದ ನಾಯಕರು ನನಗೆ ಈ ಸ್ಥಾನ ಬೇಕು ಎಂದು ಲಾಬಿನಡೆಸಿದ್ದಾರೆ. ಈ ಮಧ್ಯೆ, ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಂಭಾವ್ಯ ಸಚಿವರು ಯಾರು?

ಕೃಷ್ಣಬೈರೇಗೌಡ – ಬ್ಯಾಟರಾಯನಪುರ
ಎಂ.ಕೃಷ್ಣಪ್ಪ – ವಿಜಯನಗರ
ಟಿ.ಬಿ.ಜಯಚಂದ್ರ – ಶಿರಾ
ಚಲುವರಾಯಸ್ವಾಮಿ – ನಾಗಮಂಗಲ
ಶಿವಲಿಂಗೇಗೌಡ – ಅರಸೀಕೆರೆ
ಡಿ.ಸುಧಾಕರ್ – ಹಿರಿಯೂರು
K.Y.ನಂಜೇಗೌಡ – ಮಾಲೂರು
ಟಿ.ಡಿ.ರಾಜೇಗೌಡ – ಶೃಂಗೇರಿ
ಡಾ.ಜಿ.ಪರಮೇಶ್ವರ್ – ಕೊರಟಗೆರೆ
ಪ್ರಿಯಾಂಕ್ ಖರ್ಗೆ – ಚಿತ್ತಾಪುರ
K.H.ಮುನಿಯಪ್ಪ – ದೇವನಹಳ್ಳಿ
ಸತೀಶ್ ಜಾರಕಿಹೊಳಿ – ಯಮಕನಮರಡಿ
H.C.ಮಹದೇವಪ್ಪ – ಟಿ.ನರಸೀಪುರ
R.B.ತಿಮ್ಮಾಪೂರ – ಮುಧೋಳ
ತುಕಾರಾಂ – ಸಂಡೂರು
ರಾಜಾ ವೆಂಕಟಪ್ಪ ನಾಯಕ – ಸುರಪುರ
ನಾಗೇಂದ್ರ – ಬಳ್ಳಾರಿ ಗ್ರಾಮೀಣ
ಬೈರತಿ ಸುರೇಶ್ – ಹೆಬ್ಬಾಳ
H.Y.ಮೇಟಿ – ಬಾಗಲಕೋಟೆ
ರಾಘವೇಂದ್ರ ಹಿಟ್ನಾಳ್ – ಕೊಪ್ಪಳ
M.B.ಪಾಟೀಲ್ – ಬಬಲೇಶ್ವರ
ಶಾಮನೂರು ಶಿವಶಂಕರಪ್ಪ – ದಾವಣಗೆರೆ ದಕ್ಷಿಣ
ಈಶ್ವರ್ ಖಂಡ್ರೆ – ಭಾಲ್ಕಿ
ಲಕ್ಷ್ಮಣ ಸವದಿ – ಅಥಣಿ
S.S.ಮಲ್ಲಿಕಾರ್ಜುನ – ದಾವಣಗೆರೆ ಉತ್ತರ
ಬಸವರಾಜ ರಾಯರೆಡ್ಡಿ – ಯಲಬುರ್ಗಾ
ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ
ವಿನಯ್ ಕುಲಕರ್ಣಿ – ಧಾರವಾಡ ಗ್ರಾಮೀಣ
ಶಿವಾನಂದ ಪಾಟೀಲ್ – ಬಸವನಬಾಗೇವಾಡಿ
B.K.ಸಂಗಮೇಶ್ – ಭದ್ರಾವತಿ
G.S.ಪಾಟೀಲ್ – ರೋಣ
ಯಶವಂತರಾಯಗೌಡ ಪಾಟೀಲ್ – ಇಂಡಿ
C.S.ನಾಡಗೌಡ – ಮುದ್ದೇಬಿಹಾಳ
ರಾಮಲಿಂಗಾರೆಡ್ಡಿ – BTM ಲೇಔಟ್
H.K.ಪಾಟೀಲ್ – ಗದಗ
B.K.ಹರಿಪ್ರಸಾದ್ – MLC
ಸಂತೋಷ್ ಲಾಡ್ – ಕಲಘಟಗಿ
ಅಜಯ್ ಸಿಂಗ್ – ಜೇವರ್ಗಿ
ಪುಟ್ಟರಂಗಶೆಟ್ಟಿ – ಚಾಮರಾಜನಗರ
ಸತೀಶ್ ಸೈಲ್ – ಕಾರವಾರ
ಜಮೀರ್ ಅಹ್ಮದ್ – ಚಾಮರಾಜಪೇಟೆ
ಕೆ‌.ಜೆ.ಜಾರ್ಜ್ – ಸರ್ವಜ್ಞನಗರ
ಸಲೀಂ ಅಹ್ಮದ್ – MLC
ತನ್ವೀರ್ ಸೇಠ್ – ನರಸಿಂಹರಾಜ
N.A.ಹ್ಯಾರಿಸ್ – ಶಾಂತಿನಗರ
U.T.ಖಾದರ್ – ಉಳ್ಳಾಲ
H.C.ಬಾಲಕೃಷ್ಣ – ಮಾಗಡಿ
H.D.ರಂಗನಾಥ್ – ಕುಣಿಗಲ್
ದಿನೇಶ್ ಗುಂಡೂರಾವ್ – ಗಾಂಧಿನಗರ
K.N.ರಾಜಣ್ಣ – ಮಧುಗಿರಿ
ಮಧುಬಂಗಾರಪ್ಪ – ಸೊರಬ
ಅಜಯ್ ಧರ್ಮಸಿಂಗ್ – ಜೇವರ್ಗಿ
ಅಲ್ಲಮ‌ಪ್ರಭು ಪಾಟೀಲ್ – ಕಲಬುರಗಿ ದಕ್ಷಿಣ
ಶಿವರಾಜ್ ತಂಗಡಗಿ – ಕನಕಗಿರಿ
ರಹೀಂಖಾನ್ – ಬೀದರ್
M.P.ನರೇಂದ್ರ ಸ್ವಾಮಿ – ಮಳವಳ್ಳ

RELATED ARTICLES

Related Articles

TRENDING ARTICLES