Thursday, May 9, 2024

ಕೈನೋವಿನ ಮಧ್ಯೆಯೂ ಸೌಂದರ್ಯ ಜಗದೀಶ್ ಅಂತಿಮ ದರ್ಶನ ಪಡೆದ ದರ್ಶನ್

ಬೆಂಗಳೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ತಮ್ಮ ಕೈನೋವಿನ ಸಂದರ್ಭದಲ್ಲಿಯೂ ಆಪ್ತ ಸ್ನೇಹಿತ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಅಂತಿಮ ದರ್ಶನ್ ಪಡೆದರು.

ಸೌಂದರ್ಯ ಜಗದೀಶ್ ಅವರು ಇಮದು ತಮ್ಮ ನಿವಾಸದಲ್ಲಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ಈ ಬೆನ್ನಲ್ಲೇ ಕನ್ನಡ ಚಿತ್ರರಂಗದ ಗಣ್ಯರು ಜಗದೀಶ್‌ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ಸೌಂದರ್ಯ ಜಗದೀಶ್ ಆತ್ಮಹತ್ಯೆ ನಟ ದರ್ಶನ್​ ಅವರಿಗೂ ಶಾಕ್ ಕೊಟ್ಟಿದೆ. ಜಗದೀಶ್​ ಅಗಲಿಕೆ ಕುಟುಂಬದವರಿಗೆ ಬರ ಸಿಡಿಲೇ ಬಡಿದಂತಾಗಿದೆ. ಹಲವು ವರ್ಷಗಳ ಸ್ನೇಹಿತರಾದ ಜಗದೀಶ್‌ ನಿಧನದ ಸುದ್ದಿ ತಿಳಿದ ಬಳಿಕ ನಟ ದರ್ಶನ್‌ ಅವರು ತಮ್ಮ ಆಪ್ತರೊಂದಿಗೆ ಆಗಮಿಸಿ, ಸ್ನೇಹಿತನಿಗೆ ಅಂತಿಮ ನಮ ಸಲ್ಲಿಸಿದರು.

ದರ್ಶನ್ ಆಗಮಿಸಿದ ವೇಳೆ ಜಗದೀಶ್​ ಅವರ ಪುತ್ರ ತಂದೆಯ ಮೃತದೇಹ ನೋಡುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆಗ ದರ್ಶನ್ ಅವರು ಸ್ನೇಹಿತ್ನನ್ನ ಸಮಾಧಾನ ಮಾಡಿದರು. ಅಲ್ಲದೆ, ಸ್ನೇಹಿತ್​ನನ್ನ ಒಳಗಡೆ ಕರೆದುಕೊಂಡು ನಿನ್ನ ಜೊತೆ ತಾವು ಇರುವುದಾಗಿ ಧೈರ್ಯ ತುಂಬಿದರು. ಜಗದೀಶ್ ಮಗಳು ಹಾಗೂ ಕುಟುಂಬದವರಿಗೆ ಸಂತೈಸಿದರು.

ಈ ವೇಳೆ, ದರ್ಶನ್ ಜೊತೆ ನಟ ಧನ್ವೀರ್ ಗೌಡ ಮತ್ತು ಯಶಸ್ ಸೂರ್ಯ ಆಗಮನಿಸಿದ್ದರು. ಕಾಟೇರಾ ಚಿತ್ರದ ನಿರ್ದೇಶಕ ತರುಣ್ ಸಹ ಸೌಂದರ್ಯ ಜಗದೀಶ್‌ಗೆ ಅಂತಿಮ ದರ್ಶನ ಪಡೆದರು. ನಟ ಉಪೇಂದ್ರ ದಂಪತಿ, ನಟಿ ಅಮೂಲ್ಯ, ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್, ಲವ್ಲಿ ಸ್ಟಾರ್ ಪ್ರೇಮ್, ಗುರುಕಿರಣ್ ದಂಪತಿ, ನಟ ಗುರುನಂದನ್ ಸೇರಿದಂತೆ ಅನೇಕರು ಆಗಮಿಸಿದ್ದರು.

ಏಪ್ರಿಲ್ 15ರಂದು (ನಾಳೆ) ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ ನಡೆಯಲಿದೆ.

RELATED ARTICLES

Related Articles

TRENDING ARTICLES