Thursday, May 9, 2024

ಸಿದ್ರಾಮಯ್ಯ 10 ತಿಂಗಳಲ್ಲಿ ನಯಾ ಪೈಸೆ ಕೆಲಸ ಮಾಡಿಲ್ಲ : ಬಸವರಾಜ ಬೊಮ್ಮಾಯಿ

ಹಾವೇರಿ : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಕಳೆದ 10 ತಿಂಗಳಲ್ಲಿ ನಯಾ ಪೈಸೆ ಕೆಲಸ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರಿನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಮೋದಿಯವರ ವಿರುದ್ದ ಹೇಳಲು ಏನು ಇಲ್ಲ. ಸಂವಿಧಾನ ಬದಲಾವಣೆ ಆಗಲ್ಲ ಎಂದು ಮೋದಿಯವರು ಹೇಳಿದ್ದಾರೆ. ರಾಜ್ಯದಲ್ಲಿ 10 ತಿಂಗಳಲ್ಲಿ ನಯಾ ಪೈಸೆ ಅಭಿವೃದ್ಧಿ ಕೆಲಸದವಾಗಿಲ್ಲ. ನಮ್ಮ ಸರ್ಕಾರ ಇದ್ದಾಗ ಪ್ರವಾಹ ಬಂತು, ಒಂದು ತಿಂಗಳಲ್ಲಿ ಪರಿಹಾರ ಕೊಟ್ಟಿದ್ದೇವೆ ಎಂದು ಕುಟುಕಿದರು.

ಭಯೋತ್ಪಾದನೆ ಮುಕ್ತ ಭಾರತ ಮಾಡಿದ್ದು ಮೋದಿ

59 ತಿಂಗಳು ಅಭಿವೃದ್ಧಿ ಮಾಡೋಣ, ಒಂದು ತಿಂಗಳು ರಾಜಕೀಯ. ಗೋಡಾ ಹೈ, ಮೈದಾಮ ಹೈ. ಶಿಗ್ಗಾವಿ ಸವಣೂರು ಮಾದರಿಯಲ್ಲಿ ಈ ಭಾಗದ ಹಳ್ಳಿ ಅಭಿವೃದ್ಧಿ ಮಾಡುತ್ತೇನೆ. 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜಕಾರಣ ಬದಲಾವಣೆ ಮಾಡಿದ್ದಾರೆ. ಭಯೋತ್ಪಾದನೆ ಮುಕ್ತ ಭಾರತ ಮಾಡಿದ್ದು ಮೋದಿಯವರು ಎಂದು ಹೇಳಿದರು.

ಕಾಂಗ್ರೆಸ್​ನವ್ರು ಭಾರತ್ ಮಾತಾಕಿ ಜೈ ಅಂದ್ರೆ ಸ್ವಾಗತ

ಭಾರತ ಮಾತಾಕಿ ಜೈ ಘೋಷಣೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್​ನವರು ಭಾರತ್ ಮಾತಾಕಿ ಜೈ ಅಂತ ಕೂಗಿದ್ರೆ ಸ್ವಾಗತ. ಭಾರತ ಮಾತೆ ಇನ್ನೂ ಖುಷಿಯಾಗ್ತಾಳೆ. ಮಲ್ಲಿಕಾರ್ಜುನ ಖರ್ಗೆಯವರ ಅಪ್ಪಣೆ ತಗೊಂಡು ಕೂಗಿದ್ರೆ, ಅಲ್ಲಿಯ ಪರಿಸ್ಥಿತಿ ಬಿಂಬಿಸುತ್ತದೆ. 230 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ ಇನ್ನೊಬ್ಬರ ಬಗ್ಗೆ ಸಿದ್ದರಾಮಯ್ಯನವರು ಮಾತನಾಡುತ್ತಾರೆ. ಅವರ ಎಲೆಯೊಳಗೆ ಕತ್ತೆ ಬಿದ್ದಿದೆ ಎಂದು ಸಿದ್ದರಾಮಯ್ಯ ವಿರುದ್ದ ಬೊಮ್ಮಾಯಿ ಹರಿಹಾಯ್ದರು.

RELATED ARTICLES

Related Articles

TRENDING ARTICLES