Friday, May 3, 2024

ಮಾನ ಮರ್ಯಾದೆ ಇದ್ದಿದ್ರೆ ಸಿಎಂ ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್​ ಮನೆಗೆ ಹೋಗುತ್ತಿರಲಿಲ್ಲ: ಆರ್​ ಅಶೋಕ್​

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿರುವ ಕುರಿತು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್​ ಅಶೋಕ್​ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಾನ ಮರ್ಯಾದೆ ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶ್ರೀನಿವಾಸ್​ ಪ್ರಸಾದ್​ ಅವರ ಮನೆಗೆ ಹೋಗಿದ್ದಾರೆ, ಶ್ರೀನಿವಾಸ್​ ಅವರು ಇವತ್ತಿಗೂ ಬಿಜೆಪಿ ಸಂಸದರು, ಈ ಹಿಂದೆ ಸಿದ್ದರಾಮಯ್ಯ ಮತ್ತು ಶ್ರೀನಿವಾಸ್​ ಪ್ರಸಾದ್​ ಅವರು ಪರಸ್ಪರ ಕೆಟ್ಟದಾಗಿ ಬೈದಾಡಿಕೊಂಡಿದ್ದರು, ಶ್ರೀನಿವಾಸ್​ ಪ್ರಸಾದ್​ ಸಿದ್ದರಾಮಯ್ಯ ವಿರುದ್ದ ವಂಚಕ, ದ್ರೋಹಿ ಎಂದು ಕೆಟ್ಟದಾಗಿಯೇ ಮಾತನಾಡಿದ್ದರು, ಇದೆಲ್ಲವನ್ನು ಬಿಟ್ಟು ಮಾನ ಮರ್ಯಾದೆ ಇದ್ದಿದ್ದರೆ ಒಬ್ಬ ಸಿಎಂ ಆಗಿ ಅವರ ಮನೆಗೆ ಹೋಗಬಾರದಿತ್ತು ಎಂದರು.

ಇದನ್ನೂ ಓದಿ: ನಾಮಪತ್ರ ಹಿಂಪಡೆದ ಬಿಎಸ್ಪಿ ಅಭ್ಯರ್ಥಿ ಪಕ್ಷದಿಂದ ಉಚ್ಛಾಟನೆ : ಮಾರಸಂದ್ರ ಮುನಿಯಪ್ಪ

ಓಟಿಗೋಸ್ಕರ‌ ಮರ್ಯಾದೆ ಕಳ್ಕೊಂಡು ಇರ್ತೇನೆ ಅಂದ್ರೆ ಅದು ಸಿಎಂ ಸಿದ್ದರಾಮಯ್ಯ ಮಾತ್ರ, ಸಿದ್ದರಾಮಯ್ಯ ಪಕ್ಷದಿಂದ ಪಕ್ಷಕ್ಕೆ ಜಂಪ್‌ ಮಾಡೋರು, ಶ್ರೀನಿವಾಸ್ ಪ್ರಸಾದ್ ಮತ್ತು ಅವರ ಅಳಿಯ ಹರ್ಷವರ್ಧನ್ ನಮ್ಮ ಪಕ್ಷದಲ್ಲಿ ಇದ್ದಾರೆ. ಸಿದ್ದರಾಮಯ್ಯ ಗೆ ಮೈಸೂರು, ಚಾಮರಾಜನಗರದಲ್ಲಿ ಗೆಲ್ಲುವ ವಿಶ್ವಾಸ ಇಲ್ಲ
ಸೋಲಿನ ಭಯದಿಂದಲೇ ಶ್ರೀನಿವಾಸ ಪ್ರಸಾದ್ ಮನೆಗೆ ಹೋಗಿದ್ದಾರೆ ಎಂದು ಅವರ ವಿರುದ್ದ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES