Friday, May 17, 2024

ಬೆಂಗಳೂರಿಗೆ ತಂಪೆರೆದ ವರುಣ : ರಾಜ್ಯದ ಕೆಲವೆಡೆ ಭಾರಿ ಮಳೆ

ಬೆಂಗಳೂರು : ಭೀಕರ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನತೆಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ. ಕಳೆದ ನಾಲ್ಕು ತಿಂಗಳ ಬಳಿಕ ಬೆಂಗಳೂರಿನಲ್ಲಿ ಮಳೆಯಾಗಿದೆ.

ನಗರದ ರಾಜಾಜಿನಗರ, ರೇಸ್​ಕೋರ್ಸ್​, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬಿಸಿಲಿನ ಝಳದಿಂದ ಹೈರಾಣಾಗಿದ್ದ ಜನರು ಕೊಂಚ ರಿಲೀಫ್ ಆಗಿದ್ದಾರೆ.

ವಸಂತಪುರ, ಕುಮಾರಸ್ವಾಮಿ ಲೇಔಟ್, ವಿಜಯನಗರ, ಟಿನ್ ಫ್ಯಾಕ್ಟರಿ, ಕೆ.ಆರ್‌. ಪುರ, ವೈಟ್ ಫೀಲ್ಡ್, ಕಲ್ಯಾಣ ನಗರ ಸೇರಿದಂತೆ ಪೂರ್ವ ವಲಯ ಹಾಗೂ ನಗರದ ದಕ್ಷಿಣ ಭಾಗಗಳ ಹಲವೆಡೆ ಸುತ್ತಮುತ್ತ ಮಳೆಯಾಗಿದೆ. ನಗರದ ಇನ್ನೂ ಹಲವು ಕಡೆ ಮೋಡ ಕವಿದ ವಾತಾವರಣವಿದ್ದು ಮಳೆಯ ಸೂಚನೆ ಇದೆ.

ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್​ ಗಿಂತಲೂ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಇದರ ನಡುವೆಯೇ ಕೆಲವು ಕಡೆಗಳಲ್ಲಿ ವರುಣನ ಆಗಮನವಾಗಿದೆ.

RELATED ARTICLES

Related Articles

TRENDING ARTICLES