Friday, May 17, 2024

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ : ಕೆ.ಎಸ್. ಈಶ್ವರಪ್ಪ ಮನವಿ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಇಂದು ಶಿವಮೊಗ್ಗ ನಗರದಲ್ಲಿ ಮತ ಯಾಚನೆ ನಡೆಸಿದರು. 

ಶಿವಮೊಗ್ಗ ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ ಶೋರೂಂ, ಸುಪ್ರೀಂ ಬಜಾಜ್ ಶೋರೂಂ ಹಾಗು ಸಾಗರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದ ಕಾರ್ಖಾನೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಕಾರ್ಮಿಕರಲ್ಲಿ ಮತ ಯಾಚನೆ ನಡೆಸಿದರು.

ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ. ನನ್ನ ಸ್ಪರ್ಧೆಗೆ ಕಾರಣ ನೀವೆಲ್ಲಾ ಮಾಧ್ಯಮಗಳಲ್ಲಿ ನೋಡಿದ್ದೀರಿ. ಆದರೆ, ವಿರೋಧಿಗಳು ಮತ್ತೊಬ್ಬ ಈಶ್ವರಪ್ಪ ಎನ್ನುವ ವ್ಯಕ್ತಿಯನ್ನು ನಿಲ್ಲಿಸುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನೀವೆಲ್ಲಾ ನನಗೆ ಮತ ಹಾಕುವಾಗ ಎಚ್ಚರದಿಂದ ಮತ ನೀಡಿ. ನನ್ನ ಗುರುತು ಕಬ್ಬಿನ ಜೊತೆ ಇರುವ ರೈತ ಚಿಹ್ನೆ ಕ್ರಮ ಸಂಖ್ಯೆ 8 ಕೆ.ಎಸ್. ಈಶ್ವರಪ್ಪ ಹೆಸರಿಗೆ ಮತ ಹಾಕಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ಒಂದು ದಿನ ರಜೆ ಕೊಡುವಂತೆ ಮನವಿ

ಇನ್ನು ಮತಯಾಚನೆ ವೇಳೆ ಶೋರೂಂ, ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳ ಮಾಲೀಕರ ಬಳಿ ಕೆ.ಎಸ್. ಈಶ್ವರಪ್ಪ ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿಗಳಿಗೆ ಒಂದು ದಿನ ರಜೆ ಕೊಡುವಂತೆ ಮನವಿ ಮಾಡಿದರು. ಈಶ್ವರಪ್ಪ ಮನವಿ ಮೇರೆಗೆ ಮಾಲೀಕರು‌ ನಿಮ್ಮ ಪರ ಪ್ರಚಾರ ಮಾಡಲು ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ರಜೆ ಕೊಡುವುದಾಗಿ ಭರವಸೆ ನೀಡಿದರು.

RELATED ARTICLES

Related Articles

TRENDING ARTICLES