Wednesday, May 8, 2024

ಮೋದಿ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ‘ಕಾಳಿ ಮಾತೆ’ಗೆ ಅರ್ಪಿಸಿದ ಅಭಿಮಾನಿ

ಕಾರವಾರ : ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಅಭಿಮಾನಿಯೊಬ್ಬ ಕಾಳಿ ಮಾತೆಗೆ ತನ್ನ ಬೆರಳನ್ನೇ ಕತ್ತರಿಸಿ ಅರ್ಪಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.

ಸೋನಾರವಾಡ ನಿವಾಸಿ ಅರುಣ್ ವರ್ಣೇಕರ್ ಅವರೇ ಬೆರಳು ಕತ್ತರಿಸಿಕೊಂಡ ಅಭಿಮಾನಿ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ತನ್ನ ಎಡಗೈನ ಬೆರಳನ್ನೇ ಕಾಳಿ ಮಾತೆಗೆ ಅರ್ಪಿಸಿದ್ದಾರೆ.

ಬೆರಳು ಕತ್ತರಿಸಿಕೊಂಡಿದ್ದಲ್ಲದೇ ರಕ್ತದಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಬರೆದಿದ್ದಾರೆ. ‘ಮಾ ಕಾಳಿ ಮಾತಾ ಮೋದಿ ಬಾಬಾ ಕೋ ರಕ್ಷಾ ಕರೋ’. ‘ಮೋದಿ ಬಾಬಾ ಪಿ.ಎಂ, 3 ಬಾರ್ 78 ತಕ್ 378, 378+ ಮೇರಾ ಮೋದಿ ಬಾಬಾ ಸಬ್ಸೆ ಮಹಾನ್’ ಎಂದು ಗೋಡೆ ಹಾಗೂ ಪೋಸ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ರಾಮಮಂದಿರ ಸ್ಥಾಪನೆ ಬಳಿಕ ದೇಶದಲ್ಲಿ ಧರ್ಮ ಜಾಗೃತಿಯ ಪರ್ವ ಆರಂಭವಾಗಿದೆ : ಪೇಜಾವರ ಶ್ರೀ

ಮೋದಿಗಾಗಿ ಗುಡಿಯನ್ನು ನಿರ್ಮಿಸಿ ಪೂಜೆ

ಅರುಣ್ ವರ್ಣೇಕರ್ ಅವರು, ಈ ಹಿಂದೆಯೂ ಮೋದಿ ಗೆಲುವಿಗಾಗಿ ಬೆರಳು ಕತ್ತರಿಸಿಕೊಂಡು ಕಾಳಿ ಮಾತೆಗೆ ಅರ್ಪಿಸಿದ್ದರು. ಇದು ಕೊನೆಯ ಬಾರಿ ಆದ್ದರಿಂದ ಮೋದಿ ಪ್ರಧಾನಿಯಾಗಬೇಕು ಎಂದು ಬೆರಳನ್ನೇ ಕಾಳಿಗೆ ಅರ್ಪಿಸಿದ್ದಾರೆ. ಮೋದಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ರಕ್ತದಲ್ಲಿ ಕಾಳಿಗೆ ಹರಕೆ ಕಟ್ಟಿದ್ದರು.

ಎದೆಯ ಮೇಲೆ ‘ಮೋದಿ ಬಾಬಾ’ ಟ್ಯಾಟೂ

ಇದಲ್ಲದೇ, ಅರುಣ್ ಅವರು ಈಗಾಗಲೇ ನರೇಂದ್ರ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ತನ್ನ ಎದೆಯ ಮೇಲೆ ‘ಮೋದಿ ಬಾಬಾ’ ಎಂದು ಮೋದಿ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

RELATED ARTICLES

Related Articles

TRENDING ARTICLES