Monday, May 20, 2024

ದೇವರಾಜೇಗೌಡನನ್ನು ಬಂಧಿಸಿ ಪೋನ್​ ವಶಕ್ಕೆ ಪಡೆದರೇ ಸತ್ಯಾಂಶ ಹೊರ ಬರುತ್ತೆ: ಎಲ್​.ಆರ್​ ಶಿವರಾಮೇಗೌಡ

ಬೆಂಗಳೂರು: ಪ್ರಜ್ವಲ್​ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ದೇವರಾಜೇಗೌಡನನ್ನ ಮೊದಲು ಅರೆಸ್ಟ್ ಮಾಡಿ ಅವನ ಬಳಿ ಇರುವ ಫೋನ್ ವಶ ಮಾಡಿಕೊಳ್ಳಬೇಕು ಆಗ ಸತ್ಯಾಂಶ ಹೊರಬೀಳಲಿದೆ ಎಂದು ಮಾಜಿ ಸಂಸದ ಎಲ್​.ಆರ್​ ಶಿವರಾಮೇಗೌಡ ಅವರು ದೇವರಾಜೇಗೌಡ ವಿರುದ್ದ ಕಿಡಿಕಾರಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪೆನ್​ ಡ್ರೈವ್​ ಗೂ ನನಗೂ ಯಾವುದೇ ಸಂಬಂಧವಿಲ್ಲ, ಈಗ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನಾನು ಕೇವಲ ಫೋನ್​ ಕಾಲ್​ ಕನೆಕ್ಟ್​ ಮಾಡಿದ್ದು ಅಷ್ಟೆ ಆದರೇ, ಈಗ ಅವರು ನನ್ನ ಹೆಸರನ್ನು ಬಳಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಪೌರ ಕಾರ್ಮಿಕ ಮಹಿಳೆಯರನ್ನೂ ಬಿಡ್ತಿರಲಿಲ್ಲ: ಕಾರ್ತಿಕ್​ ಗೌಡ

ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿಸಿ ಎಂದು ದೇವರಾಜೇಗೌಡ ಏಪ್ರಿಲ್​ 29 ರಂದು ಹೊಳೆನರಸಿಪುರದಲ್ಲಿ ನನ್ನನ್ನು ಭೇಟಿ ಮಾಡಿದ. ಈ ವೇಳೆ SIT ತನಿಖೆ ಬಗ್ಗೆ ಮಾತನಾಡಿದ. ಬಳಿಕ ಡಿಕೆಶಿಕುಮಾರ್​ ಅವರನ್ನು ಭೇಟಿ ಮಾಡಿಸಿ ಎಂದ. ನಂತರ ನಾನು ಡಿಕೆ ಅವರನ್ನು ಅವರ ಮನೆಯಲ್ಲಿ ಭೇಟಿಯಾದಾಗ ಈ ವಿಚಾರ ಹೇಳಿದೆ. ಆಗ ನಾನು ದೇವರಾಜೇಗೌಡನಿಗೆ ಕರೆ ಮಾಡಿ ಬಾ ಡಿಕೆಯವರನ್ನು ಭೇಟಿ ಮಾಡು ಎಂದೆ. ಈಗ ಆಗಲ್ಲ ಎಂದು ಫೋನಿನಲ್ಲಿ ಮಾತನಾಡಿದ. ಈ ವೇಳೆ ಡಿಸಿಎಂ ಅವರ ಬಳಿ ಮಾತನಾಡಿ ನಿನ್ನ ಬಳಿ ಏನಿದ್ದಾವೆ ಅದನ್ನೆಲ್ಲಾ ಎಸ್​ಐಟಿಗೆ ಕೊಡಿ ಎಂದರು ಇಷ್ಟೆ ನಡೆದಿದ್ದು. ಆದರೇ, ನಂತರ ಈ ನಾಟಕ ಮಾಡುತ್ತಿದ್ದಾನೆ ಎಂದರು.

ಈ ಪೆನ್​ ಡ್ರೈವ್​ಗೂ ನನಗೂ ಏನೂ ಸಂಬಂಧವಿಲ್ಲ,  ಎಸ್​ಐಟಿಯವರು ದೇವರಾಜೇಗೌಡನನ್ನು ಮೊದಲು ಅರೆಸ್ಟ್ ಮಾಡಿ ಅವನ ಬಳಿ ಇರುವ ಫೋನ್ ವಶ ಮಾಡಿಕೊಳ್ಳಬೇಕು. ಅವನ ದುಡ್ಡಿನ ಮೂಲವನ್ನು ಹುಡುಕಬೇಕು, ಇವನ ಬಾಡಿಯಲ್ಲೇ ಕ್ಯಾಮರಾ ಇದೆ, ಇವನ ಬಳಿ ವಾಕಿ ಟಾಕಿ ಇದೆ, ಅವನ ಮಗನ ಬಳಿ ಮತ್ತೊಂದು ವಾಕಿ ಟಾಕಿ ಇರುತ್ತೆ, ಎಸ್​ ಐಟಿಯವರು ಇವನ ಮೂರು ತಿಂಗಳ ಫೋನ್​ ಕಾಲ್​ ಲಿಸ್ಟ್​ ತೆಗಿಸಬೇಕು ಆಗ ಸತ್ಯಾಂಶ ಹೊರಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES