Monday, May 20, 2024

ಕುಮಾರಣ್ಣ ಫಸ್ಟ್ ನಿಮ್ಮ ಡಬಲ್ ‘R’ ಬಗ್ಗೆ ಮಾತಾಡಿ, ಯಾಕೆ ಮಾತಾಡ್ತಿಲ್ಲ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ‘ಮಹಾನಯಕ’ರ ಕೈವಾಡವಿದೆ ಎಂಬ ಮಾಜಿ‌ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ನಿಮ್ಮ ಡಬಲ್ ‘ಆರ್’ ಬಗ್ಗೆ ಮಾತನಾಡಿ. ಪ್ರಜ್ವಲ್ ರೇವಣ್ಣ ಅಂಡ್ ಹೆಚ್​.ಡಿ. ರೇವಣ್ಣ ಬಗ್ಗೆ ಯಾಕೆ ಮಾತನಾಡ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಪದೇ ಪದೆ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಮೇಲೆ ಆರೋಪ ಮಾಡೋದ್ಯಾಕೆ? ನಾವು ಏನಾದರೂ ಹಿಡನ್ ಕ್ಯಾಮೆರಾ ಇಟ್ಟು ರೆರ್ಕಾಡ್ ಮಾಡಿಸಿದ್ದಿವಾ? ರೆಕಾರ್ಡ್ ಮಾಡಿದ್ದು ಅವರು, ಪೆನ್​ಡ್ರೈವ್ ಮಾಡಿದ್ದು ಅವರ ಡ್ರೈವರ್, ಹಂಚಿದ್ದು ಬಿಜೆಪಿ ಪರಾಜಿತ ಅಭ್ಯರ್ಥಿ. ಸುಮ್ಮನೆ ಮಹಾನಾಯಕ ಅಂತ ಆರೋಪ ಮಾಡೊದು ಬಿಡಬೇಕು ಎಂದು ಹೇಳಿದ್ದಾರೆ.

ಸಂತ್ರಸ್ತ ಹೆಣ್ಮಕ್ಕಳ ಬಳಿ ಕ್ಷಮೆ ಕೇಳಿ

ಕುಮಾರಸ್ವಾಮಿಯವರು ಎಸ್​ಐಟಿಯನ್ನ ತ್ರಿಬಲ್ ಎಸ್‌ಐಟಿ ಅಂತಾರೆ. ಮೊದಲು ನಿಮ್ಮ ಡಬಲ್ ‘R’ ಬಗ್ಗೆ ಮಾತನಾಡಿಲಿ. ಹೆಣ್ಣು ಮಕ್ಕಳ ಮಾನ ಹರಾಜು ಹಾಕಿದ್ದಾರೆ ಎನ್ನುವವರು ವಿಡಿಯೋ ರೆಕಾರ್ಡ್ ಮಾಡಿಕೊಂಡವರ ಬಗ್ಗೆ ಮಾತನಾಡಬೇಕಲ್ವಾ..? ಮೊದಲು ಆ ಸಂತ್ರಸ್ತ ಹೆಣ್ಣು ಮಕ್ಕಳ ಬಳಿ ಕ್ಷಮೆ ಕೇಳಲಿ. ನಮ್ಮ ಮನೆ ಮಗನಿಂದ ತಪ್ಪಾಗಿದೆ ಅಂತ ಕ್ಷಮೆಯಾಚಿಸಲಿ ಎಂದು ಕುಟುಕಿದ್ದಾರೆ.

ವಿಡಿಯೋದಲ್ಲಿರುವ ಆ್ಯಕ್ಟರ್ ಯಾರು..?

ಅಶೋಕಣ್ಣ ನಮ್ಮ ನಾಯಕರನ್ನ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ಪ್ರಡ್ಯೂಸರ್ ಅಂತಾರೆ. ಆದ್ರೆ, ಆ ವಿಡಿಯೋದಲ್ಲಿರುವ ಆ್ಯಕ್ಟರ್ ಯಾರು..? ಆ ಆ್ಯಕ್ಟರ್ ನಮ್ಮ ಪ್ರಕಾರ ವಿಲನ್, ಬಿಜೆಪಿಯವರ ಪ್ರಕಾರ ಹೀರೋ. ಡೈರೆಕ್ಟರ್, ಪ್ರಡ್ಯೂಸರ್ ಬಿಟ್ಟು ಆ್ಯಕ್ಟರ್ ಬಗ್ಗೆ ಮಾತನಾಡಲಿ ಎಂದು ಆರ್. ಅಶೋಕ್ ಹಾಗೂ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES