Wednesday, May 8, 2024

KSRTC ಬಸ್​ ಹರಿದು ವೃದ್ದ ಸಾವು!

ಬೆಂಗಳೂರು : ವೃದ್ದನೊಬ್ಬನ ಮೇಲೆ ಕೆಎಸ್​ಆರ್​ಟಿಸಿ ಬಸ್​ ಹರಿದು ವೃದ್ದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಂಪೇಗೌಡ ಬಸ್​ ನಿಲ್ದಾಣದಲ್ಲಿ ನಡೆದಿದೆ.

ಇದನ್ನೂ ಓದಿ: ಸಾವು ಗೆದ್ದು ಬಂದ ಸಾತ್ವಿಕ್​: ರಕ್ಷಣಾ ಕಾರ್ಯಾಚರಣೆ ಸಕ್ಸಸ್, ಫಲಿಸಿತು ಕೋಟಿ ಕೋಟಿ ಜನರ ನಮನ

ಗಂಗಾರೆಡ್ಡಿ (85) ಸಾವಿಗೀಡಾದ ವೃದ್ದ, ಇಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ಘಟನೆ ನಡೆದಿದೆ. ಬೆಂಗಳೂರಿನಿಂದ ಆಂಧ್ರದ ಚಿತ್ತೂರಿಗೆ ತೆರಳಲು ಮೆಜೆಸ್ಟಿಕ್​ಗೆ ಬಂದಿದ್ದ ಗಂಗಾರೆಡ್ಡಿಗೆ ಚಿಕ್ಕಮಗಳೂರಿಂದ ಬೆಂಗಳೂರಿಗೆ ಬಂದಿದ್ದ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಗಂಗಾರೆಡ್ಡಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಉಪ್ಪಾರ ಪೇಟೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES