Friday, May 17, 2024

ಸಾವು ಗೆದ್ದು ಬಂದ ಸಾತ್ವಿಕ್​: ರಕ್ಷಣಾ ಕಾರ್ಯಾಚರಣೆ ಸಕ್ಸಸ್, ಫಲಿಸಿತು ಕೋಟಿ ಕೋಟಿ ಜನರ ನಮನ

ವಿಜಯಪುರ : ಎರಡು ವರ್ಷದ ಪುಟ್ಟ ಕಂದ ತೆರೆದ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟದಲ್ಲಿ ಸಾವನ್ನೇ ಗೆದ್ದು ಬಂದಿದೆ. ಕಂದ.. ಸುರಕ್ಷಿತವಾಗಿ ಮರಳು ಎಂದು ಇಡೀ ಕುಟುಂಬ,ಜನರು ಪ್ರಾರ್ಥಿನೆ ಫಲಿಸಿದೆ. 

ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್​ನನ್ನು ಕೊನೆಗೂ ರಕ್ಷಣೆ ಮಾಡಲಾಗಿದೆ. ಸತತ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಸುರಕ್ಷಿತವಾಗಿ ತರುವಲ್ಲಿ ರಕ್ಷಣೆ ಪಡೆ ಯಶ್ವಸ್ವಿಯಾಗಿದೆ.

ಸಾತ್ವಿಕ್ ಮುಜಗೊಂಡ (2) ತೆರೆದ ಕೊಳವೆ ಬಾವಿಗೆ ಬಿದ್ದಿರುವ ಮಗು. ಆಟವಾಡಲು ಹೋಗಿದ್ದ ವೇಳೆ ಮಗು ಕೊಳವೆ ಬಾವಿಗೆ ಬಿದ್ದಿದೆ.

20 ಗಂಟೆ ನಿರಂತರ ಹೋರಾಟದಲ್ಲಿ ಸಾತ್ವಿಕ್ NDRF ​ ಹೊರತಗೆದಿದ್ದು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
20 ಅಡಿ ಆಳದಲ್ಲಿ ಸಾತ್ವಿಕ್ ಸಿಲಿಕಿದ್ದನು.

RELATED ARTICLES

Related Articles

TRENDING ARTICLES