ಮಂಗಳೂರು : ಸಿದ್ದರಾಮಯ್ಯ ಪ್ಲಸ್ ಎಕನಾಮಿಕ್ಸ್ ಅದು ‘ಸಿದ್ರಾಮಿಕ್ಸ್’. ರಾಜ್ಯಕ್ಕೆ ಸಿದ್ರಾಮಿಕ್ಸ್ ಬಂದ ಮೇಲೆ ಯಾವುದೆಲ್ಲಾ ಬೆಲೆ ಏರಿಕೆಯಾಗಿದೆ ಗೊತ್ತಾ..? ಎಂದು ಸಿಎಂ ವಿರುದ್ಧ ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಕೇರಳ ಸರಕಾರ ಸಾಲಕ್ಕಾಗಿ ಸುಪ್ರೀಂ ಕೋರ್ಟಿಗೆ ಹೋಗಿದೆ. ಕಂಠ ಪೂರ್ತಿ ಸಾಲ ಮಾಡಿ, ಕೇರಳ ದಿವಾಳಿಯ ಸ್ಥಿತಿಗೆ ತಲುಪಿದೆ. ಸದ್ಯದಲ್ಲಿ ರಾಜ್ಯದಲ್ಲೂ ಅದೇ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಬಂದ ಮೇಲೆ ಕ್ವಾರ್ಟರ್ಗೆ ಬೆಲೆ ಜಾಸ್ತಿ ಮಾಡಿದ್ರು. ಪಹಣಿ ಪತ್ರದ ಬೆಲೆ ಏರಿಕೆಯಾಯಿತು. ಮಹಿಳೆಯರೇ, ಸಿದ್ದರಾಮಯ್ಯ ಹಣ ನೀಡಿದ್ದು ಅವರ ಕಿಸೆ ಹಣ ಅಲ್ಲ. ನಿಮ್ಮ ಯಜಮಾನರ ಕಿಸೆಗೆ ಕೈ ಹಾಕಿ ನೀಡಿದ್ದು. 5 ಕಿಲೋ ಅಕ್ಕಿಯಲ್ಲಿ ಕಾಂಗ್ರೆಸ್ನ ಒಂದು ಕಾಳು ಅಕ್ಕಿಯೂ ಇಲ್ಲ. ಆ ಅಕ್ಕಿ ಕೊಟ್ಟಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಕುಟುಕಿದರು.
ವಿಜಯ ಪತಾಕೆ ಹಾರಿಸಿ ಆಗಿದೆ
ದೇಶಕ್ಕೆ ಮಗದೊಮ್ಮೆ ಮೋದಿ. ಹಿಂದುತ್ವದ ಭದ್ರಕೋಟೆ. ದಕ್ಷಿಣ ಕನ್ನಡದಲ್ಲಿ ವಿಜಯ ಪತಾಕೆ ಹಾರಿಸಿ ಆಗಿದೆ. ಗೆಲುವಿನ ಅಂತರವಷ್ಟೇ ತಿಳಿಯುವುದು ಉಳಿದಿದೆ. ಉಡುಪಿಗೆ ಕೋಟ, ಮಂಗಳೂರಿಗೆ ಚೌಟ. ಜೂನ್ 4ರಂದು ಫಲಿತಾಂಶ ಕಂಡು ಕಾಂಗ್ರೆಸ್ ನಾಯಕರು ಪರ್ಮನೆಂಟ್ ಆಗಿ ಎದೆ ಹೊಡ್ಕೋಬೇಕು ಎಂದು ಸಿ.ಟಿ. ರವಿ ಟೀಕಿಸಿದರು.