Thursday, May 9, 2024

ಬಿಜೆಪಿಗರು ಗೋಡ್ಸೆ ಮಂದಿರ ಕಟ್ಟಿ, ಪೂಜೆ ಮಾಡಬೇಕು : ಬಿ.ಕೆ ಹರಿಪ್ರಸಾದ್

ಬೆಂಗಳೂರು : ಬಿಜೆಪಿ ಸದಸ್ಯರು ನಾಥೂರಾಮ್ ಗೋಡ್ಸೆ ಮಂದಿರ ಕಟ್ಟಬೇಕು, ಪೂಜೆ ಮಾಡಬೇಕು ಎಂದು ಹೇಳ್ತಾರೆ. ಮಹಾತ್ಮ ಗಾಂಧಿ ಪುತ್ಥಳಿ ಮಾಡಿ ಅದಕ್ಕೆ ಗುಂಡು ಹಾರಿಸುವವರ ಜೊತೆಗೆ ಬಿಜೆಪಿ ಇದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಟೀಕಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಹುತ್ವ, ಪ್ರಜಾಪ್ರಭುತ್ವದಲ್ಲಿ ನಂಬಿಕೆ  ಇಟ್ಟವರು. ಸಂವಿಧಾನ ರಕ್ಷಣೆ ಮಾಡುವವರು, ಅವರು ಸಂವಿಧಾನ ವಿರೋಧಿಗಳು ಎಂದು ಕುಟುಕಿದರು.

ಕೇರಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಸ್​ಡಿಪಿಐ ಬೆಂಬಲ ವಿಚಾರವಾಗಿ ಮಾತನಾಡಿ, ಕೇರಳದಲ್ಲಿ ಎಸ್​ಡಿಪಿಐ ಬೆಂಬಲವನ್ನು ನಾವು ಕೋರಿಲ್ಲ. ಬದಲಾಗಿ, ಅವರೇ ಕೊಟ್ಟರೆ ನಾವೇನು ಮಾಡಲು ಆಗಲ್ಲ. ಕೋಮುವಾದಿ ಪಕ್ಷವನ್ನು ಸೋಲಿಸಲು ಬೆಂಬಲ ಕೊಟ್ಟರೆ ಅದು ಅವರಿಗೆ ಬಿಟ್ಟಿದ್ದು. ನಾವು ಅವರ ಬೆಂಬಲ ಕೋರಿಲ್ಲ. ಕೇರಳದಲ್ಲಿ ಯಾರ ಜೊತೆಯೂ ಮೈತ್ರಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪಾಕಿಸ್ತಾನಕ್ಕೆ ಧನ್ಯವಾದ ಹೇಳಿದವರ ಜೊತೆ ಮೈತ್ರಿ

ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸಿತ್ತು. ಪಿಡಿಪಿ ಕಾಶ್ಮೀರದಲ್ಲಿ ಚುನಾವಣೆಯ ಬಳಿಕ ಪಾಕಿಸ್ತಾನಕ್ಕೆ ಧನ್ಯವಾದ ಹೇಳಿದ ಪಕ್ಷದ ಜೊತೆಗೆ ಮೈತ್ರಿ ಮಾಡಿದ್ದಾರೆ. ಅವರ ಜೊತೆಗೆ ಬಿಜೆಪಿ ಎರಡು ವರ್ಷ ಸರ್ಕಾರ ನಡೆಸಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES