Monday, May 6, 2024

ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಮುಂದೊಂದು ದಿನ ಪ್ರಿಯಾಂಕ್ ಖರ್ಗೆ ಸಿಎಂ ಆಗೋದು ಅಷ್ಟೇ ಸತ್ಯ: ಬಾಬುರಾವ್ ಚಿಂಚನಸೂರ್

ಕಲಬುರಗಿ: ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಮುಂದೊಂದು ದಿನ ಪ್ರಿಯಾಂಕ್ ಖರ್ಗೆ ಸಿಎಂ ಆಗೋದು ಅಷ್ಟೇ ಸತ್ಯ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

ಕಾಂಗ್ರೆಸ್​ ಪ್ರಚಾರದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಮುಂದೊಂದು ದಿನ ಪ್ರಿಯಾಂಕ್ ಖರ್ಗೆ ಸಿಎಂ ಆಗೋದು ಅಷ್ಟೇ ಸತ್ಯ.ರಾಜ್ಯದಿಂದ ಬಿಜೆಪಿ ದಳ ಓಡಿಸಬೇಕಿದೆ ಎಂದು ಹೇಳಿದ್ದರು.

ಮುಂದಿನ ಪ್ರಧಾನಿ ಮಲ್ಲಿಕಾರ್ಜುನ ಖರ್ಗೆಯವರು ಆಗೋದು ಖಚಿತ 

ಮಲ್ಲಿಕಾರ್ಜುನ ಖರ್ಗೆ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಮುಂದಿನ ಪ್ರಧಾನಿ ಮಲ್ಲಿಕಾರ್ಜುನ ಖರ್ಗೆಯವರು ಆಗೋದು ಖಚಿತ. ಆ ಯೋಗ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೂಡಿಬಂದಿದೆ ಎಂದರು.

ಕೋಲಿ ಸಮಾಜಕ್ಕೆ ಡಾ ಉಮೇಶ್ ಜಾಧವ್ ದೊಡ್ಡ ಧೋಕಾ ಮಾಡಿದಾರೆ.ಸುಳ್ಳಿನ ಯುನಿವರ್ಸಿಟಿಗೆ ವೈಸ್ ಚಾನ್ಸಲರ್ ಮಾಡಬೇಕು.ಕೋಲಿ‌ ಸಮಾಜಕ್ಕೆ ಎಸ್ಟಿ ಮಾಡ್ತಿವಿ ಅಂದಿದ್ದಕ್ಕೆ ನಾನು ನಂಬಿ ಬಿಜೆಪಿ ಹೋಗಿದ್ದೆ.ನಂದು ಪಾಪದ ಕೈಯಲ್ಲ ನಂದು ಕೊಡುಗೈ ಕೈ ನಾನು‌ ದಾನ ಮಾಡಿ ಮಾಡಿ ರೋಡಿಗೆ ಬಂದ್ಬಿಟ್ಟ ಎಂದರು.

2 ಲಕ್ಷಕ್ಕೂ ಅಧಿಕ ಮತಗಳಿಂದ ರಾಧಾಕೃಷ್ಣ ದೊಡ್ಡಮನಿ ಗೆಲ್ಲುತ್ತಾರೆ

ಸಮಾಜಕ್ಕಾಗಿ ಇರೋ ಬರೋ ಎಲ್ಲಾನು ಮಾರಿಕೊಂಡು ಇಂದು ರೋಡಿಗೆ ಬಂದಿದ್ದೇನೆ ನನ್ನ ಎಲ್ಲಾ ಕಂಪನಿಗಳನ್ನ ಈ ಸಮಾಜದ ಉದ್ಧಾರಕ್ಕಾಗಿ ಮಾರಾಟ ಮಾಡಿದ್ದೇನೆ. ಈ ಬಾರಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ರಾಧಾಕೃಷ್ಣ ದೊಡ್ಡಮನಿ ಗೆಲ್ಲುತ್ತಾರೆ. ವೇದಿಕೆ ಮೇಲೆ ತೊಡೆತಟ್ಟಿ ಹೇಳಿದ ಬಾಬುರಾವ್ ಚಿಂಚನಸೂರ್ ಹೇಳಿದರು.

 

RELATED ARTICLES

Related Articles

TRENDING ARTICLES