Thursday, May 9, 2024

ಶನಿವಾರ ಸುರಿದ ಭಾರಿ ಮಳೆಗೆ ನೆಲಕಚ್ಚಿದ ದ್ರಾಕ್ಷಿ ಬೆಳೆ : ಆತಂಕದಲ್ಲಿ ರೈತ

ವಿಜಯಪುರ : ಶನಿವಾರ ಮಾ.30 ರಂದು ರಾತ್ರಿ ಜಿಲ್ಲೆಯ ಹಲವೆಡೆ ಸುರಿದ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಉರುಳಿ ಭಾರಿ ಅವಘಡ ಸಂಭವಿಸಿದೆ.

ಜಿಲ್ಲೆಯ ಇಂಡಿ ತಾಲೂಕಿನ ಹಲಗುಣಕಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಗ್ರಾಮದ ರೈತ ವಿಶ್ವನಾಥ್​ ಪಾಟೀಲ್ ಎಂಬುವವರ ದ್ರಾಕ್ಷಿ ತೋಟದಲ್ಲಿ ಭಾರಿ ಹಾನಿಯಾಗಿದೆ. ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ದ್ರಾಕ್ಷಿ ತೋಟದಲ್ಲಿ ಕಟ್ಟಲಾಗಿದ್ದ ಚಪ್ಪರದ ಮೇಲೆ ಉರುಳಿ ಬಿದ್ದಿದೆ, ಇದರಿಂದ ದಾಕ್ಷಿ ಬೆಳೆ ನೆಲಕಚ್ಚಿದ್ದು ಬಾರಿ ಪ್ರಮಾಣದ ನಷ್ಟ ಉಂಟಾಗಿದೆ.

ಇದನ್ನೂಓದಿ: 1ಲೀ. ಪೆಟ್ರೋಲ್ ಬೆಲೆ ​ ₹289ಕ್ಕೆ ಏರಿಕೆ!

ಘಟನೆಯಿಂದ ಕಟಾವಿಗೆ ಬಂದಿದ್ದ ದ್ರಾಕ್ಷಿ ಬೆಳೆ ನೆಲದ ಪಾಲಾಗಿದ್ದು ಸಂಪೂರ್ಣ ಹಾಳಾಗಿದೆ. ಇರಿಂದ ರೈತ ವಿಶ್ವನಾಥ ಪಾಟೀಲ್ ಕಂಗಾಲಾಗಿದ್ದು ತೋಟಗಾರಿಕಾ ಇಲಾಖೆ ಅಧಿಕಾರಿಳು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ದ್ರಾಕ್ಷಿ ಬೆಳೆಗಾರರ ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES