ರಾಮನಗರ: ಕಾಂಗ್ರೆಸ್ನವ್ರು ಫ್ಲಾನಿಂಗ್ ಮಾಡೋದ್ರಲ್ಲಿ ನಿಸ್ಸೀಮರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕಣದಲ್ಲಿ ಮತ್ತೊಬ್ಬ ಡಾ.ಮಂಜುನಾಥ್ ಸ್ಪರ್ಧೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ.ಡಾ.ಮಂಜುನಾಥ್ ಎಂಬ ಮತ್ತೊಬ್ಬ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಿದ್ದಾರೆ.ಇದರಲ್ಲಿ ಕಾಂಗ್ರೆಸ್ನ ಹತಾಶ ಮನೋಭಾವ ಕಾಣ್ತಿದೆ.ಸೋಲಿನ ಭಯದಲ್ಲಿ ಹೀಗೆ ಮಾಡ್ತಿದ್ದಾರೆ ಎಂದರು.
ರಾಮನಗರದಲ್ಲೂ ಮಂಡ್ಯದ ರೀತಿ ಸ್ವಾಭಿಮಾನ ಕುರಿತು ಚರ್ಚೆ ವಿಚಾರವಾಗಿ ಮಾತನಾಡಿದ ಅವರು,ಬಹಳ ಜನಕ್ಕೆ ಸ್ವಾಭಿಮಾನದ ಅರ್ಥ ಗೊತ್ತಿಲ್ಲ.ಬರೀ ಚುನಾವಣಾ ಸಂದರ್ಭದಲ್ಲಿ ಮಾತ್ರ ಅವರಿಗೆ ಸ್ವಾಭಿಮಾನ ಗೊತ್ತಾಗೋದು.ಈ ರೀತಿಯ ಸ್ವಾಭಿಮಾನ ವಿಚಾರದ ಚರ್ಚೆ ಬಿಟ್ಟು ಪ್ರಾಮಾಣಿಕವಾಗಿ ಜನರ ಕೆಲಸ ಮಾಡಿ.
ಮನಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ.ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: JDS Candidate List: ಬಿಡುಗಡೆ ಆಯ್ತು ಜೆಡಿಎಸ್ ಅಧಿಕೃತ ಅಭ್ಯರ್ಥಿಗಳ ಪಟ್ಟಿ; ಮೂರು ಕ್ಷೇತ್ರಗಳಿಗೆ ಇವರೇ ಕ್ಯಾಂಡಿಡೇಟ್
ಚನ್ನಪಟ್ಟಣ ಕಾರ್ಯಕರ್ತರ ವಿರೋಧದ ನಡುವೆಯೂ ಮಂಡ್ಯದಿಂದ ಹೆಚ್ಡಿಕೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು,ಮಂಡ್ಯದ ಕಾರ್ಯಕರ್ತರು ಸಾಕಷ್ಟು ಒತ್ತಡ ಹೇರಿದ್ರು.ಈ ಬಾರಿ ಮಂಡ್ಯದ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿ ಬೇಕು ಎನ್ನುವ ಒತ್ತಾಯ ಮಾಡಿದ್ದರು. ಬಿಜೆಪಿ ಹೈಕಮಾಂಡ್ ಕೂಡ ಕುಮಾರಣ್ಣ ಅವರ ಜನಪರ ಆಡಳಿತ ನೋಡಿ ಸ್ಪರ್ಧೆ ಮಾಡುವಂತೆ ಹೇಳಿತ್ತು.ಮಂಡ್ಯದಲ್ಲಿ ಹಿಂದೆ ಕುಮಾರಣ್ಣ ಸ್ಪರ್ಧೆ ಮಾಡದಿದ್ರೂ ನಮ್ಮ ಅಭ್ಯರ್ಥಿಗಳ ನಿಲ್ಲಿಸಿ ಗೆಲ್ಲಿಸಿದ್ದಾರೆ.ಹಾಗಾಗಿ ಅವರು ಅಭ್ಯರ್ಥಿ ಆದ್ರೆ ಗೆಲುವು ಸರಳ ಎಂದು ಅವರನ್ನೇ ಅಭ್ಯರ್ಥಿ ಮಾಡಲಾಗಿದೆ ಎಂದರು.
ನಾನಾಗಲಿ, ನಮ್ಮ ತಂದೆಯಾಗಲಿ ಯಾವತ್ತೂ ರಾಮನಗರ ಬಿಡಲ್ಲ.ನಾವು ಇಲ್ಲೇ ಇರ್ತೀವಿ, ಜನರ ನಡಿವೆಯೇ ಜೀವನ ಮಾಡ್ತೀವಿ.ನಮ್ಮ ಮನೆ ಇರೋದು ಕೂಡಾ ಬಿಡದಿಯಲ್ಲೇ.ನಾವು ರಾಮನಗರ ಬಿಟ್ಟು ಎಲ್ಲೂ ಹೋಗಲ್ಲ ಎಂದು ಹೇಳಿದ್ದರು.