Monday, May 13, 2024

ಇಕ್ಬಾಲ್ ಅನ್ಸಾರಿ ಒಬ್ಬ ಹುಚ್ಚ : ಜನಾರ್ದನ ರೆಡ್ಡಿ

ಕೊಪ್ಪಳ : ಕಾಂಗ್ರೆಸ್ ನಾಯಕರ ವಿರುದ್ದ ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ಇಕ್ಬಾಲ್ ಅನ್ಸಾರಿ ಒಬ್ಬ ಹುಚ್ಚ ಎಂದು ಜರಿದಿದ್ದಾರೆ.

ಕೊಪ್ಪಳದ ಆನೆಗೊಂದಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಲೇ ಇಕ್ಬಾಲ್ ಎನ್ನಬಹುದು. ಆದ್ರೆ, ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ತಿಳಿಸಿದ್ದಾರೆ.

ಇಕ್ಬಾಲ್ ಅನ್ಸಾರಿ ನನ್ನ ಬಗ್ಗೆ ಏಕವಚದಲ್ಲಿ ಮಾತನಾಡುತ್ತಾರೆ. ನನಗೆ ಅವಾ, ಇವಾ ಅಂತ ಭಾಷಣದಲ್ಲಿ ಮಾತನಾಡ್ತಾನೆ. ಇಕ್ಬಾಲ್ ಅನ್ಸಾರಿ ಆ ರೀತಿ ಮಾತನಾಡುವುದು ನನಗೆ ದೊಡ್ಡದಲ್ಲ. ನಾನು ಕೂಡಾ ಲೇ ಇಕ್ಬಾಲ್ ಅನ್ನಬಹುದು. ಆದ್ರೆ, ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಕುಟುಕಿದ್ದಾರೆ.

ನಾನು ಯಾವತ್ತು ಆ ರೀತಿ ಮಾತನಾಡುವುದಿಲ್ಲ. ಇಕ್ಬಾಲ್ ಅನ್ಸಾರಿಗೆ ಸಂಸ್ಕಾರ, ಸಂಸ್ಕೃತಿ ಇಲ್ಲದೇ ಇರಬಹುದು. ಇಕ್ಬಾಲ್ ಅನ್ಸಾರಿ ಸ್ವಂತ ಮನೆಯವರಿಗೆ ಏನು ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಇಕ್ಬಾಲ್ ಅನ್ಸಾರಿ ಹುಚ್ಚ ಆಗಿದ್ದಾನೆ. ಹುಚ್ಚಾಗಿ ಏನೇನೋ ಮಾತನಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES