Monday, May 13, 2024

ಆ ರಾಹುಲ್ ಗಾಂಧಿ ಜಗತ್ತಿನ ವಿಶಿಷ್ಟ ವಿಜ್ಞಾನಿ : ಶಾಸಕ ಯತ್ನಾಳ್

ಕಲಬುರಗಿ : ಆ ರಾಹುಲ್ ಗಾಂಧಿ ಜಗತ್ತಿನ ವಿಶಿಷ್ಟ ವಿಜ್ಞಾನಿ. ಆಲೂಗಡ್ಡೆಯಲ್ಲಿ ಚಿನ್ನ ತೆಗೆದ ಎಂದು ಏಕವಚನದಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.

ಕಲಬುರಗಿ ಜಿಲ್ಲೆ ವಾಡಿಯಲ್ಲಿ ಮಾತನಾಡಿದ ಅವರು, 50 ವರ್ಷಗಳಿಂದ ಬರೀ ಗರಿಬೀ ಹಠಾವೋ, ಗರೀಬರು ಹಠಾವ್ ಆದ್ರು. ಗರಿಬೀ ಹಠಾವ್ ಆಗಿಲ್ಲ ಎಂದು ಟೀಕಿಸಿದರು.

ನಮ್ಮೊಳಗಿನ ನಮಕ್‌ ಹರಾಮರು ಪಾಕಿಸ್ತಾನ್ ಜಿಂದಾಬಾದ್ ಅಂತ ಘೋಷಣೆ ಕೂಗುತ್ತಾರೆ. ಇವರೇನು ಪಾಕಿಸ್ತಾನ ಸಗಣಿ ತಿಂತಿದಾರ? ನಾವು ಹಿಂದೂಗಳು ಒಂದಾಗದ ಹೊರೆತು ಇದೆಲ್ಲಾ ನಿಲ್ಲುವುದಿಲ್ಲ. ಇಲ್ಲಂದ್ರೆ ನಮ್ಮ ದೇಶ ಕೆಲವೇ ದಿನಗಳಲ್ಲಿ ಪಾಕಿಸ್ತಾನಮಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾವು ನಿಮಗೋಸ್ಕರ ಚೊಂಬು ಮಾಡಿದೀವಿ

ಪ್ರಧಾನಿ ಮೋದಿ ಏನು ಮಾಡ್ಯಾರ, ಏನು ಮಾಡ್ಯಾರ? ಚೊಂಬು ಕೊಟ್ಯಾರ ಅಂತಿದಾರೆ. ನಾವು ನಿಮಗೋಸ್ಕರ ಚೊಂಬು ಮಾಡಿದೀವಿ. ನೀವಂತೂ ಶೌಚಾಲಯ ಮಾಡಿಲ್ಲ. ಅದಕ್ಕೆ ಚುನಾವಣೆ ಮುಗಿದ ನಂತರ ಚೊಂಬು ಕೊಡಬೇಕು ಅಂತ ರೆಡಿ ಮಾಡೀವಿ. ಉಚಿತ ಕರೆಂಟ್ ಕೊಟ್ರು, ರೇಟ್ ಹೆಚ್ಚಿಗೆ ಮಾಡಿದ್ರು. ಬಸ್ ಟಿಕೆಟ್ ಡಬಲ್ ಮಾಡಿದ್ರು, ಮಹಿಳೆಯರಿಗೆ ಉಚಿತ ಕೊಟ್ರು. ಎಣ್ಣೆ ರೇಟ್ ಹೆಚ್ಚಿಗೆ ಮಾಡಿದ್ರು ಎಂದು ಕುಟುಕಿದರು.

ದೇಶದಲ್ಲಿ ಲವ್ ಜಿಹಾದ್ ನಡೆಯುತ್ತಿದೆ

ಅಂಬೇಡ್ಕರ್‌ ಅವರನ್ನ ಯಾಕೆ ಪ್ರಧಾನಿ ಮಾಡಿಲ್ಲ ಎಂದು ನಾನು ಪ್ರಶ್ನಿಸಿದ್ದೆ. ಮೊದಲು ಹಿಂದೂ ದೇವಸ್ಥಾನಗಳಿಗೆ ಹೋಗ್ತಿರಲಿಲ್ಲ. ಬರೀ ಮಸೀದಿಗಳಿಗೆ ಹೋಗ್ತಿದ್ರಿ. ದೇಶದಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ದೇಶವನ್ನು ಇಸ್ಲಾಂ ರಾಷ್ಟ್ರ ಮಾಡಲು ಪಿಎಫ್‌ಐ ಹೊಂಚು ಹಾಕಿದೆ. 50 ರೂ. ಚಸ್ಮಾ ಹಾಕೊಂಡು, ಗಲ್ಲಿ ಗಲ್ಲಿಯೊಳಗೆ ಸ್ಟೈಲ್ ಮಾಡಿಕೊಂಡು ಬೈಕ್ ಮೇಲೆ ಬರ್ತಾರೆ ಎಂದು ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES