Monday, May 13, 2024

ಗ್ಯಾರಂಟಿ ಮೇಲ್ನೋಟಕ್ಕೆ ಸಿಹಿ ಆಗಿ ಕಾಣುತ್ತೆ : ಸುಮಲತಾ ಅಂಬರೀಶ್

ದಾವಣಗೆರೆ : ಕಾಂಗ್ರೆಸ್​ ಗ್ಯಾರಂಟಿ ಮೇಲ್ನೋಟಕ್ಕೆ ಸಿಹಿ ಆಗಿ ಕಾಣುತ್ತೆ. ತಾತ್ಕಾಲಿಕವಾಗಿ ಮರುಳಾದರೆ ಶಾಶ್ವತವಾಗಿ ಭವಿಷ್ಯಕ್ಕೆ ನಷ್ಟ ಎಂದು ಸಂಸದೆ ಸುಮಲತಾ ಅಂಬರೀಶ್ ಕುಟುಕಿದರು.

ದಾವಣಗೆರೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳೆಯರು, ಯುವಕರು, ರೈತರ ಪರ ನಿಲ್ಲುವ ಆಯ್ಕೆ ಮೋದಿ. ಭಾರತೀಯ ಜನತಾ ಪಕ್ಷದ ಕಮಲದ ಗುರುತಿಗೆ ನಿಮ್ಮ ಮತ ಹಾಕಿ ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ಅವರನ್ನು ವಿಶ್ವಗುರು ಅಂತ ಕರೆಯುತ್ತಿದ್ದಾರೆ. 2047ಕ್ಕೆ ದೇಶವನ್ನು ನಂಬರ್ ಒನ್ ಮಾಡುವ ಸಂಕಲ್ಪ ಹೊಂದಿದ್ದಾರೆ. ಸದೃಢ ಭಾರತದ ಭವಿಷ್ಯ ಕಟ್ಟಲು ಶ್ರಮ ವಹಿಸುತ್ತಾರೆ. ಮತ್ತೊಮ್ಮೆ ಮೋದಿ ಸರ್ಕಾರ ಬಂದರೆ ನಮ್ಮ ಭವಿಷ್ಯ ಉಜ್ವಲ ಆಗುತ್ತದೆ ಎಂದು ಹೇಳಿದರು.

ಎಲ್ಲರೂ ಮಾತನಾಡಿ ಹೋದರು. ಆದರೆ, ರಾಮಮಂದಿರ ಕಟ್ಟಿದ್ದು ನರೇಂದ್ರ ಮೋದಿ. ಶ್ರೀರಾಮ ಹದಿನಾಲ್ಕು ವರ್ಷ ವನವಾಸದಲ್ಲಿ ಇದ್ದರು. ಆದರೆ, ಇವರು 500 ವರ್ಷ ವನವಾಸಕ್ಕ ಕಳಿಸಿದ್ರು. ಮತ್ತೆ ಜನ್ಮಸ್ಥಳಕ್ಕೆ ರಾಮನನ್ನ ಕೂರಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಹೀಗಾಗಿ, ಮತ್ತೊಮ್ಮೆ ಮೋದಿಯವರು ಪ್ರಧಾನಿ ಆಗಬೇಕು ಎಂದು ತಿಳಿಸಿದರು.

ಫೇವರೆಟ್ ಟಿಫನ್ ದಾವಣಗೆರೆ ಬೆಣ್ಣೆ ದೋಸೆ

ಅಂಬರೀಶ್​ಗೆ ಫೇವರೆಟ್ ಟಿಫನ್ ಅಂದರೆ ಅದು ದಾವಣಗೆರೆ ಬೆಣ್ಣೆ ದೋಸೆ. ಕಳೆದ ಬಾರಿ ಗಾಯತ್ರಿ ಸಿದ್ದೇಶ್ವರ್ ಅವರು ಪತಿ ಸಿದ್ದೇಶ್ವರ್​ಗೆ ಕೇಳಿದ್ದರಂತೆ, ಯಾರು ಗೆದ್ದರು ಎಂದು. ಆಗ ಸಿದ್ದೇಶ್ವರ್ ನಾನೇ ಗೆದ್ದೆ ಎಂದಿದ್ದಾರೆ. ಅಯ್ಯೋ ನಿಮದಲ್ಲ ರೀ, ಸುಮಲತಾ ಗೆದ್ರಾ ಹೇಳಿ ಅಂದ್ರಂತೆ. ಈ ಸನ್ನಿವೇಶ ನನಗೆ ಗಾಯತ್ರಿ ಸಿದ್ದೇಶ್ವರ್ ಹೇಳಿದ್ದು ಖುಷಿ ಆಯ್ತು. ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಇದು, ಯೋಚಿಸಿ ನಿಮ್ಮ ಅಮೂಲ್ಯ ಮತ ನೀಡಿ ಎಂದು ಸುಮಲತಾ ಅಂಬರೀಶ್ ಹೇಳಿದರು.

RELATED ARTICLES

Related Articles

TRENDING ARTICLES