Friday, May 10, 2024

ಇದು ರಾಮ-ರಾವಣರ ಯುದ್ಧ,ಇದರಲ್ಲಿ ಯಾವುದೇ ಅನುಮಾನ ಇಲ್ಲ: ಶಾಸಕ ಮುನಿರತ್ನ

ರಾಮನಗರ: ಇದು ರಾಮ-ರಾವಣರ ಯುದ್ದ,ಇದರಲ್ಲಿ ಯಾವುದೇ ಅನುಮಾನ ಇಲ್ಲ ರಾವಣ ಯಾರು ಅಂತ ಜನ ತೀರ್ಪು ಕೊಟ್ಟಾಗ ಗೊತ್ತಾಗುತ್ತೆ ಎಂದು ಡಿ.ಕೆ.ಬ್ರದರ್ಸ್ ವಿರುದ್ಧ ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮಗೆ ಯಾವ ಯಾವ ಕೋಟೆ ಏನಾಗಿದೆ ಅಂತ ಗೊತ್ತು.ನಾವು ತುಂಬಾ ಕೋಟೆಗಳನ್ನ ನೋಡಿದ್ದೇವೆ. ಚರಿಯತ್ರೆಯಲ್ಲಿ ಯಾವ ಕೋಟೆಗಳು ಉಳಿದಿಲ್ಲ.
ಉಳಿದಿರೋ ಕೋಟೆಗಳು ಯಾವಾದ್ರೂ ಇದ್ಯಾ.? ಮದಕರಿ, ಟಿಪ್ಪು, ವಿಜಯನಗರ ಯಾವ ಸಾಮ್ರಾಜ್ಯದ ಕೋಟೆಯೂ ಉಳಿದಿಲ್ಲ ಇನ್ನೂ ಈ ಕೋಟೆ ಉಳಿಯುತ್ತಾ ಇಲ್ಲಿ ನಡೆಯುತ್ತಿರೋದು ರಾಮ-ರಾವಣರ ಯುದ್ದ
ರಾವಣ ಯಾರು ಅಂತ ಜನ ತೀರ್ಪು ಕೊಟ್ಟಾಗ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದ್ದಾರೆ.

ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗ್ತಿದೆ. ಕನಕಪುರದಲ್ಲಿ ಹೆಚ್ಚು ಲೀಡ್ ಪಡೆಯುತ್ತೇವೆ.ಮೈತ್ರಿ ಅಭ್ಯರ್ಥಿಗೆ ಕುಟುಂಬ ರಾಜಕಾರಣ ಆರೋಪ ಅನ್ವಯಿಸಲ್ಲ. ಡಾಕ್ಟರ್ ಎಲ್ಲೂ ದೇವೇಗೌಡರ ಅಳಿಯ ಅಂತ ಗುರುತಿಸಿಕೊಂಡಿಲ್ಲ. ಡಾಕ್ಟರ್ ಸ್ವಂತ ಶಕ್ತಿ, ಹೆಸರಿನ ಮೇಲೆ ಸ್ಪರ್ಧೆ ಮಾಡ್ತಾರೆ. ಈ ಬಾರಿ ಕನಕಪುರದಲ್ಲಿ ಹೆಚ್ಚು ಲೀಡ್ ಪಡೆಯೋದು ಶತಸಿದ್ಧ ಎಂದರು.

ಡಾ.ಮಂಜುನಾಥ್​ ಕೇಂದ್ರ ಸಚಿವ ಸ್ಥಾನ ಸಿಗುವ ವಿಚಾರವಾಗಿ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಡಾ.ಮಂಜುನಾಥ್ ಗೆಲುವು ಸಾಧಿಸಿ, ಕೇಂದ್ರ ಮಂತ್ರಿ ಆಗಿ ಆಗ್ತಾರೆ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES