Wednesday, May 8, 2024

ಪುಲ್ವಾಮಾ ದಾಳಿ ಪ್ರಧಾನಿ ಮೋದಿ ಮಾಡಿಸಿದ ಮರ್ಡರ್ : ಶಾಸಕ SR ಶ್ರೀನಿವಾಸ್

ತುಮಕೂರು : ಪುಲ್ವಾಮಾ ದಾಳಿ ಪ್ರಧಾನಿ ಮೋದಿ ಮಾಡಿಸಿದ ಮರ್ಡರ್ ಎಂದು ಮೋದಿ ವಿರುದ್ಧ ಕಾಂಗ್ರೆಸ್​ ಶಾಸಕ ಎಸ್.ಆರ್. ಶ್ರೀನಿವಾಸ್ ಆರೋಪ ಮಾಡಿದ್ದಾರೆ.

ತುಮಕೂರಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿಯೋವರೆಗೂ ಮೋದಿ ಬರ್ತಾ ಇರ್ತಾನೆ. ಸುಳ್ಳನ್ನ ಬಿಡ್ತಾ ಇರ್ತಾನೆ ಎಂದು ಹರಿಹಾಯ್ದಿದ್ದಾರೆ.

ಮೊದಲನೇ ಸುಳ್ಳೇ ಜನ್​ಧನ್ ಅಕೌಂಟ್. ನೀವು ಓಡೋಗಿ ಅಕೌಂಟ್ ಮಾಡಿಸಿದ್ರಿ, ಹಣ ಬಂತಾ..? ನಿಮ್ಮ ಅಕೌಂಟ್​ಗೆ ಕಾಂಗ್ರೆಸ್ ಕಪ್ಪುಹಣ ಹಾಕ್ತೀನಿ ಅಂದ ಈ ಪುಣ್ಯಾತ್ಮ. ನಿಮ್ಮ ಅಕೌಂಟ್​ಗೆ ಎಷ್ಟು ಹಣ ಬಿದ್ದಿದ್ದೆ. ಇಂಥ ಮೋಸಗಾರ, ಇಂಥ ವಂಚನೆ ಮಾಡೋನು, ಇಂಥ ದ್ರೋಹಿ ಈ ದೇಶಕ್ಕೆ ಬೇಕಾ? ಎಂದು ಕುಟುಕಿದ್ದಾರೆ.

ಪಕೋಡ ಮಾರಿ, ಟೀ ಮಾರಿ ಅಂತಾನೆ

ಯುವ ಜನತೆಗೆ 2 ಲಕ್ಷ ವರ್ಷಕ್ಕೆ ಉದ್ಯೋಗ ಕೊಡ್ತೀನಿ ಅಂದಿದ್ದ ಈ ಮನುಷ್ಯ. ಉದ್ಯೋಗ ಕೊಡಿ ಅಂದ್ರೆ ಪಕೋಡ ಮಾರಿ ಅಂದ. ಇದನ್ನ ಇವನೇ ಹೇಳಬೇಕ ನಮಗೆ..? ಪಕೋಡ ಮಾರಿ ಅಂತ ಹೇಳೋಕೆ ನಾವು ಪ್ರಧಾನಿ ಮಾಡಿದ್ವಾ..? ಕಷ್ಟಪಟ್ಟು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡ್ತೀವಿ, ಅದಕ್ಕೆ ಸಮರ್ಪಕವಾಗಿ ಉದ್ಯೋಗ ಕೊಡೋದು ಅವರ ಕೆಲಸ. ಅದು ಮಾಡಯ್ಯ ನೀನು ಅಂದ್ರೆ, ಪಕೋಡ ಮಾರಿ, ಟೀ ಮಾರಿ ಅಂತಾನೆ. ಅವನ್ಯಾವನು ನಮಗೆ ಹೇಳೋಕೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಕಳ್ಳ, ಬಿಡ್ತಾನಾ ದೇಶನಾ?

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ, ಸರ್ವ ಸ್ವತಂತ್ರರು ನಾವು. ಅಂಬೇಡ್ಕರ್ ಅವರು ಸಂವಿಧಾನದತ್ತವಾದ ಹಕ್ಕು ಕೊಟ್ಟಿದ್ದಾರೆ. ಇವನ್ಯಾರು ಮೋದಿ ನಮಗೆ ಹೇಳೋಕೆ. ಪಕೋಡ ಮಾರು ಅಂತ ಹೇಳೋ ವ್ಯಕ್ತಿಗೆ ನೀವು ವೋಟು ಹಾಕ್ತಿರಾ? ಕಾಂಗ್ರೆಸ್ ಈ ದೇಶ ಲೂಟಿ ಮಾಡ್ತೂ ಅಂತಾನೆ. ನೀವೆಲ್ಲಾ ಚುನಾವಣಾ ಬಾಂಡ್ ಬಗ್ಗೆ ಓದ್ತಾ ಇದ್ದೀರಾ? ಇಡಿ, ಐಟಿ ದಾಳಿ ಮಾಡಿಸೋದು ಅವರು ಕಾಣಿಕೆ ಒಪ್ಪಿಸುತ್ತಿದ್ದಂತೆ ವಾಪಸ್ ತಗೋಳೋದು. ಒಬ್ಬೊಬ್ಬನ ಹತ್ತಿರ 200 ರಿಂದ 300 ಕೋಟಿ ಒಡೆದಿದ್ದಾನಲ್ಲ ಈ ಕಳ್ಳ, ಬಿಡ್ತಾನಾ ಈ ದೇಶನಾ? ಎಂದು ಶಾಸಕ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES