ಹಾಸನ : ತಾಳಿ ಕಟ್ಟುವ ವೇಳೆಯೇ ಸಿನಿಮಿಯ ರೀತಿಯಲ್ಲಿ ಮದುವೆ ಮುರಿದು ಬಿದ್ದ ಘಟನೆ ಹಾಸನ ಜಿಲ್ಲೆ ಬೇಲೂರು ಕಲ್ಯಾಣ ಮಂಟಪದವೊಂದರಲ್ಲಿ ನಡೆದಿದೆ.
ಮದುವೆಯಾಗುತಿದ್ದ ಯುವತಿಯ ಲವರ್ ಮದುವೆ ಸಮಯದಲ್ಲಿ ಎಂಟ್ರಿ ಕೊಟ್ಟು ತಾಳಿ ಕಿತ್ತುಕೊಂಡು ಪ್ರತಿಭಟಿಸಿದಾಗ ಸತ್ಯ ಬಯಲಾಗಿದೆ. ಮದುವೆ ಮಂಟಪದ ಜನ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಬೇಲೂರಿನ ಒಕ್ಕಲಿಗ ಸಂಘದಲ್ಲಿ ಶಿವಮೊಗ್ಗ ಮೂಲದ ಪ್ರಮೋದ್ ಹಾಗೂ ಬೇಲೂರು ಮೂಲದ ತೇಜಸ್ವಿನಿ ಮದುವೆ ನಡೆಯುತ್ತಿತ್ತು. ಆದ್ರೆ, ಈ ವೇಳೆ ಹಾಸನನದ ಗವೆನಹಳ್ಳಿ ಮೂಲದ ನವೀನ್ ಎಂಬ ಯುವಕ ಎಂಟ್ರಿ ಕೊಟ್ಟು ಮದುವೆ ತಾಳಿ ಇಟ್ಟುಕೊಂಡು ಪ್ರತಿಭಟಿಸಿದ್ದಾನೆ. ಮದುವೆಯಾಗುತ್ತಿರೋ ಯುವತಿ ನಾನು ಪ್ರೀತಿಸುತ್ತಿದ್ದೆವು. ಆಕೆಯನ್ನ ನಾನೇ ಮದುವೆಯಾಗಬೇಕೆಂದು ನವೀನ್ ಗಲಾಟೆ ಮಾಡಿದ್ದಾನೆ. ಕಲ್ಯಾಣ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಮದುವೆ ಹೆಣ್ಣೇ ನನಗೆ ಮೆಸೇಜ್ ಮಾಡಿದ್ದಳು
ಈ ಗೊಂದಲ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಪ್ರಿಯಕರ ನವೀನ್, ಮದುವೆ ಹೆಣ್ಣೇ ನನಗೆ ಮೆಸೇಜ್ ಮಾಡಿ ತನ್ನ ಮದುವೆ ತಡಿಯುವಂತೆ ಕೂರಿದ್ದಳು ಎಂಬ ವಿಚಾರ ತಿಳಿಸಿದ್ದಾನೆ. ಆದ್ರೆ, ನವೀನ್ ಯಾರು ಎಂದೇ ನನಗೆ ಗೊತ್ತಿಲ್ಲ ಅಂತ ಮದವಣಗಿತ್ತಿ ಯೂಟರ್ನ್ ಹೊಡೆದಿದ್ದಾಳೆ. ಇದರಿಂದ ಪೋಷಕರಿಗೂ ನೋವಾಗಿದೆ.
ಮದುವೆ ಬೇಡ ಎಂದು ಪಟ್ಟು ಹಿಡಿದ ಯುವತಿ
ಸದ್ಯ ಯುವತಿ ನವೀನ್ ನೊಂದಿಗೆ ಮೆಸೇಜ್ ಮಾಡಿರೋ ಬಗ್ಗೆ ಪೊಲೀಸ್ ತನಿಖೆ ನಡೆಸಿದ್ದಾರೆ. ಇತ್ತ ತೇಜಸ್ವಿನಿ ಮದುವೆಯಾಗಲು ಬಂದಿದ್ದ ಪ್ರಮೋದ್ ಕುಮಾರ್ ಈ ಗಲಾಟೆ ನಂತರ ವಪಾಸ್ ಆಗಿದ್ದಾರೆ. ಆದರೆ, ತೇಜಸ್ವಿನಿ ಮಾತ್ರ ತನಗೆ ಮದುವೆಯೇ ಬೇಡ ಎಂದು ಪಟ್ಟು ಹಿಡಿದಿದ್ದಾಳೆ.
ಒಟ್ನಲ್ಲಿ, ಮದುವೆ ಮಂಟಪದಲ್ಲಿ ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಪ್ರೀತಿ ಪ್ರೇಮದ ಕಾರಣ ಸಿನಿಮಿಯ ರೀತಿ ನಿಂತು ಹೋಗಿದೆ. ಸತ್ಯಾಸತ್ಯತೆ ಬಗ್ಗೆ ಬೇಲೂರು ಪೊಲೀಸ್ ತನಿಖೆ ಮಾಡಿದ್ದಾರೆ.