Thursday, May 9, 2024

ರಾಹುಲ್ ಜಿ.. ಎಷ್ಟೇ ಹುಡುಕಿದರೂ ಹೆಣ್ಣು ಸಿಗುತ್ತಿಲ್ಲ : ಇದು ಸಾಫ್ಟ್​ವೇರ್ ಕುವರನ ಅಳಲು

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಇದರಿಂದ ಮದುವೆಗೆ ಹೆಣ್ಣು ಕೊಡ್ತಿಲ್ಲ ಎಂದು ಸಾಫ್ಟ್​ವೇರ್ ಕುವರನೊಬ್ಬ ತನ್ನ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲ. ಇದೇ ಕಾರಣಕ್ಕೆ ವರನಿಗೆ ವಧು ಸಿಕ್ತಿಲ್ಲ. IT ಉದ್ಯೋಗಿ ಆದ್ರೂ ಕರಿಮಣಿ ಮಾಲೀಕನಾಗದ ತನ್ನ ಸ್ನೇಹಿತನ ಸಮಸ್ಯೆ ಪರಿಹರಿಸಿ ಎಂದು ಎಕ್ಸ್​ ಖಾತೆಯಲ್ಲಿ ಸ್ನೇಹಿತ ಮನವಿ ಮಾಡಿದ್ದಾನೆ.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿ ನೀರಿನ ಸಮಸ್ಯೆ ಮುಕ್ತಗೊಳಿಸಿ ಎಂದು ಮನವಿ ಮಾಡಿದ್ದಾರೆ. ಎಕ್ಸ್​ನಲ್ಲಿ ಸ್ನೇಹಿತನಿಗೆ ಸಿಗದ ಶಾದಿ ಭಾಗ್ಯದ ನೋವು ಹೊರ ಹಾಕಿದ್ದಾರೆ. ಜಲ ಕಂಟಕ ಎದುರಿಸುತ್ತಿರುವ ಬೆಂಗಳೂರಿನ ಉದ್ಯೋಗಿ ಬೇಡ ಎಂದು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದಾರಂತೆ.

ಯುವಕನ ಪೋಸ್ಟ್​ನಲ್ಲಿ ಏನಿದೆ?

ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ.. ಆದ್ಯತೆಯ ಮೇರೆಗೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು, ವಧುವಿನ ಹುಡುಕಾಟದಲ್ಲಿದ್ದಾರೆ. ಎಷ್ಟೇ ಹುಡುಕಿದರೂ ವಧು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಯಾವುದೇ ಹುಡುಗಿಯರು ಬೆಂಗಳೂರು ಉದ್ಯೋಗಿಯೊಂದಿಗೆ ಮದುವೆಯಾಗಲು ಸಿದ್ಧರಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿಗೆ ಟ್ಯಾಗ್ ಕೂಡ ಮಾಡಿದ್ದಾರೆ.

RELATED ARTICLES

Related Articles

TRENDING ARTICLES