Thursday, May 9, 2024

ಮಗಳ ಕಳ್ಳತನ: ಮರ್ಯಾದೆಗೆ ಅಂಜಿದ ತಂದೆ ತಾಯಿ ಆತ್ಮಹತ್ಯೆ!

ರಾಯಚೂರು : ಪ್ರೀತಿಸಿದ ಪ್ರಿಯಕರನಿಗಾಗಿ ತಾನು ಟ್ಯೂಷನ್​ ಹೇಳುತ್ತಿದ್ದ ಮನೆಯಲ್ಲಿ ಡೈಮಂಡ್ ಹಾಗು ಚಿನ್ನದ ಸರ ಕದ್ದಿದ್ದಕ್ಕೆ ಮರ್ಯಾದೆಗೆ ಅಂಜಿದ ಪೋಷಕರು ರೈಲಿಗೆ ಸಿಲಿಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ಎಮರಸ್​ ಎಂಬಲ್ಲಿ ನಡೆದಿದೆ.

ವಿಚಿತ್ರ ಅಂದ್ರೆ ಹೆತ್ತ ತಂದೆ ತಾಯಿಯೊಟ್ಟಿಗೆ ರೈಲ್ವೇ ಕಂಬಿಗೆ ತಲೆ‌ ಕೊಟ್ಟ ಯುವತಿ ಕೂಡ ಸಾವು ಬದುಕಿನ ಮಧ್ಯೆ ಹೋರಾಡ್ತಿದಾಳೆ. ಮಗಳು‌ ಮಾಡಿದ ಎಡವಟ್ಟು ಕೆಲಸಕ್ಕೆ ಹೆತ್ತವರ ಪ್ರಾಣಪಕ್ಷಿ ಹಾರಿಹೋಗಿದೆ.

ಇದನ್ನೂ ಓದಿ: ಆನೆ ದಾಳಿ; ಮೃತನ ಕುಟುಂಬ ಪರಿಹಾರ ಹಣ ಸ್ವೀಕರಿಸಲು ನಿರಾಕರಿಸಿದ್ದು ಬಿಜೆಪಿ ವಿರೋಧದಿಂದ

ಅಷ್ಟಕ್ಕೂ ಆ ಯುವತಿ ಪ್ರಿಯಕರನಿಗಾಗಿ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಪ್ರಿಯಕರನ ಜೊತೆ ಓಡಿ ಹೋಗಲು ನಿರ್ಧರಿಸಿ ಆ ಕೃತ್ಯ ಎಸಗಿದ್ದಳು. ಮನೆಯಲ್ಲಿ ಒಡವೆ ಕಳ್ಳತನವಾಗಿದ್ದರ ಹಿನ್ನೆಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆತಂಕಕ್ಕೊಳಗಾದ ಯುವತಿ ಕದ್ದ ಒಡವೆಗಳಲ್ಲಿ ಕೆಲವನ್ನು ಟ್ಯೂಷನ್ ಮನೆಯಲ್ಲಿ ಯಾರು ಇಲ್ಲದ ವೇಳೆ ಕಿಟಿಕಿಯಿಂದ ವಾಪಾಸ್​ ಹಾಕಿದ್ದಾಳೆ. ಆದರೇ, ಆಕೆಯ ಕೃತ್ಯ ಸಿಸಿಟಿವಿಯಲ್ಲಿ ಬಯಲಾಗಿ, ಚಿನ್ನಾಭರಣ ವಾಪಸ್​ ಕೊಡಲು ಮನೆಯವರು ಎಚ್ಚರಿಸಿದ್ದರು.

ಈ ವಿಚಾರ ಯುವತಿ ಕುಟುಂಬಸ್ಥರಿಗೆ ತಿಳಿದು ಮರ್ಯಾದೆಗೆ ಅಂಜಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಈ ವೇಳೆ ಯುವತಿಯೂ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿ ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.

RELATED ARTICLES

Related Articles

TRENDING ARTICLES