ರಾಯಚೂರು : ಪ್ರೀತಿಸಿದ ಪ್ರಿಯಕರನಿಗಾಗಿ ತಾನು ಟ್ಯೂಷನ್ ಹೇಳುತ್ತಿದ್ದ ಮನೆಯಲ್ಲಿ ಡೈಮಂಡ್ ಹಾಗು ಚಿನ್ನದ ಸರ ಕದ್ದಿದ್ದಕ್ಕೆ ಮರ್ಯಾದೆಗೆ ಅಂಜಿದ ಪೋಷಕರು ರೈಲಿಗೆ ಸಿಲಿಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ಎಮರಸ್ ಎಂಬಲ್ಲಿ ನಡೆದಿದೆ.
ವಿಚಿತ್ರ ಅಂದ್ರೆ ಹೆತ್ತ ತಂದೆ ತಾಯಿಯೊಟ್ಟಿಗೆ ರೈಲ್ವೇ ಕಂಬಿಗೆ ತಲೆ ಕೊಟ್ಟ ಯುವತಿ ಕೂಡ ಸಾವು ಬದುಕಿನ ಮಧ್ಯೆ ಹೋರಾಡ್ತಿದಾಳೆ. ಮಗಳು ಮಾಡಿದ ಎಡವಟ್ಟು ಕೆಲಸಕ್ಕೆ ಹೆತ್ತವರ ಪ್ರಾಣಪಕ್ಷಿ ಹಾರಿಹೋಗಿದೆ.
ಇದನ್ನೂ ಓದಿ: ಆನೆ ದಾಳಿ; ಮೃತನ ಕುಟುಂಬ ಪರಿಹಾರ ಹಣ ಸ್ವೀಕರಿಸಲು ನಿರಾಕರಿಸಿದ್ದು ಬಿಜೆಪಿ ವಿರೋಧದಿಂದ
ಅಷ್ಟಕ್ಕೂ ಆ ಯುವತಿ ಪ್ರಿಯಕರನಿಗಾಗಿ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಪ್ರಿಯಕರನ ಜೊತೆ ಓಡಿ ಹೋಗಲು ನಿರ್ಧರಿಸಿ ಆ ಕೃತ್ಯ ಎಸಗಿದ್ದಳು. ಮನೆಯಲ್ಲಿ ಒಡವೆ ಕಳ್ಳತನವಾಗಿದ್ದರ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆತಂಕಕ್ಕೊಳಗಾದ ಯುವತಿ ಕದ್ದ ಒಡವೆಗಳಲ್ಲಿ ಕೆಲವನ್ನು ಟ್ಯೂಷನ್ ಮನೆಯಲ್ಲಿ ಯಾರು ಇಲ್ಲದ ವೇಳೆ ಕಿಟಿಕಿಯಿಂದ ವಾಪಾಸ್ ಹಾಕಿದ್ದಾಳೆ. ಆದರೇ, ಆಕೆಯ ಕೃತ್ಯ ಸಿಸಿಟಿವಿಯಲ್ಲಿ ಬಯಲಾಗಿ, ಚಿನ್ನಾಭರಣ ವಾಪಸ್ ಕೊಡಲು ಮನೆಯವರು ಎಚ್ಚರಿಸಿದ್ದರು.
ಈ ವಿಚಾರ ಯುವತಿ ಕುಟುಂಬಸ್ಥರಿಗೆ ತಿಳಿದು ಮರ್ಯಾದೆಗೆ ಅಂಜಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಈ ವೇಳೆ ಯುವತಿಯೂ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿ ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.