ಬೆಂಗಳೂರು : ರಾಮೇಶ್ವರಂ ಕೆಫೆ ಮೇಲೆ ನಡೆದಂತ ದಾಳಿಗಳಿಗೆ ಹಿಂದೂ ಸಮಾಜ ಯಾವತ್ತು ಬೆದರಿಲ್ಲ, ಬೆದರುವುದೇ ಇಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಕುಂದ್ಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆ ದಾಳಿಯ ಬಳಿಕ ಇಂದು ಮತ್ತೆ ಆರಂಭವಾಗುತ್ತಿರುವ ಹಿನ್ನೆಲೆ ಪೂಜಾ ಕಾರ್ಯಗಳು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುತಾಲಿಕ್ ಮತ್ತು ಕಾರ್ಯಕರ್ತರು ಭಾಗಿಯಾಗುವ ಮುನ್ನ ಮಾದ್ಯಮದೊಂದಿಗೆ ಪ್ರತ್ರಿಕ್ರಿಯೆ ನೀಡಿದರು.
ಇದನ್ನೂ ಓದಿ: Sudha Murthy: ರಾಜ್ಯಸಭೆಗೆ ಸುಧಾಮೂರ್ತಿ ನಾಮ ನಿರ್ದೇಶನ
ಇಸ್ಲಾಂಮಿಕ್ ಶಕ್ತಿಗಳು ಭಯೋತ್ಪಾದನೇ ಮೂಲಕ ಇಸ್ಲಾಂ ಪ್ರತಿಷ್ಟಾಪನೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೇ ಇದು ಸಾಧ್ಯವಿಲ್ಲ ಎನ್ನುವುದಕ್ಕೆ ರಾಮೇಶ್ವರಂ ಕೆಫೆ ಮತ್ತೆ ಉದ್ಗಾಟನೆಯಾಗುತ್ತಿರುವುದೇ ಸಾಕ್ಷಿ ಎಂದರು.
ಪರಪ್ಪನ ಅಗ್ರಹಾರದ ಜೈಲಿನ ವಿಷಯವನ್ನ ನಾವೇ ಹೇಳಿದ್ದು, ದೊಡ್ಡಬಳ್ಳಾಪುರದಲ್ಲಿ 30 ಟನ್ ಗಳ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರನ್ನು ನಮ್ಮ ಕಾರ್ಯಕರ್ತರು ಹಿಡಿದಿದ್ದರು, ಇರನ್ನು 48 ದಿನಗಳ ಕಾಲ ಒಳಗಡೆ ಹಾಕಿದ್ದರು , ಈ ವೇಳೆ ಅಗ್ರಹಾರದಲ್ಲಿದ್ದ ಪಾಕಿಸ್ತಾನಿ, ಬಾಂಗ್ಲಾದೇಶ್ ಭಯೋತ್ಪಾದಕರನ್ನು ಹಿಂಬಾಲಿಸಿ ಒಂದು ವರದಿ ಮಾಡಿದ್ದರು ಆ ವರದಿಯ ಮೂಲಕವೇ ಈ ಪ್ರಕರಣ ಹೊರಬಂದಿದೆ, ರಾಜಕಾರಣಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಇಂದು ಏನೇನು ಆಗುತ್ತಿದೆ ಎನ್ನುವುದನ್ನು ಅವರು ಗಮನಿಸಬೇಕು ಎಂದರು.
ಈ ಪ್ರಕರಣದ ತನಿಖೆಗೆ ಎನ್ಐಎ ಮುಂದಾಗಿರುವುದು ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿ ಬಂಧಿಸಿಸುತ್ತಿರುವುದನ್ನು ನಾವು ಅಭಿನಂದಿಸುತ್ತೇವೆ ಎಂದು ಅವರು ಹೇಳಿದರು.