Friday, May 3, 2024

ಕಡುಬಡವರನ್ನು ಉದ್ದಾರ ಮಾಡಿದ್ದು ಬಿಎಸ್​ವೈ: ಕೋಟಾ ಶ್ರೀನಿವಾಸ್​ ಪೂಜಾರಿ

ಶಿವಮೊಗ್ಗ : ಕರ್ನಾಟಕದಲ್ಲಿ‌‌ ಕಡುಬಡವರನ್ನು ಉದ್ದಾರ ಮಾಡಿದ್ದು ಮಾಜಿ ಸಿಎಂ ಯಡಿಯೂರಪ್ಪನವರು ಎಂದು ಕೋಟಾ ಶ್ರೀನಿವಾಸ್​​ ಪೂಜಾರಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸೇಂದಿ ತೆಗೆಯಲು ಹೋಗಿ ಕೆಳಗೆ ಬಿದ್ದವರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದಾಗ, ಅವರು ಇನ್ನೂ ಅದೇ ದಾರಿಯಲ್ಲಿ ಸಾಗದೆ, ಸೇಂದಿ ತೆಗೆಯುವ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗಬೇಕೆಂದು ಕರೆ ನೀಡಿದವರು ಯಡಿಯೂರಪ್ಪ.

ಇದನ್ನೂ ಓದಿ: ಸವಾಲ್ ಯಾಕೆ ಕುಸ್ತಿ ಆಡೋಕೆ ಬರಲಿ ನೋಡೋಣ : ಶಾಮನೂರು ಶಿವಶಂಕರಪ್ಪ

ನಾನು ಧಾರ್ಮಿಕ ದತ್ತಿ ಇಲಾಖೆ ಸಚಿವರಾದಾಗ ನಾರಾಯಣ ಗುರು ಮಂದಿರವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಮಾಡಿದೆ. ನಾರಾಯಣ ಗುರುಗಳ ಬಗ್ಗೆ ನಮಗೆ ನಂಬಿಕೆ ಇದೆ. ಗಾಂಧಿಜೀರವರು ನಾರಾಯಣ ಗುರುಗಳನ್ನು ಆಧುನಿಕ ಬ್ರಹ್ಮ ಎಂದು ಹೇಳಿದ್ದಾರೆ. ನಮ್ಮ ಸಮಾಜಕ್ಕೆ ಶಕ್ತಿ ತುಂಬಿದವರು ಯಡಿಯೂರಪ್ಪನವರು.

ಕೊಲ್ಲೂರಿನ ಕೂಡಚಾದ್ರಿ ಬೆಟ್ಟಕ್ಕೆ ರೋಪ್ ವೇ ಮಾಡಿದ್ದು ಸಂಸದ ರಾಘವೇಂದ್ರ. ಸಿಗಂದೂರು ದೇವಾಲಯಕ್ಕೆ ಸೇತುವೆ ನಿರ್ಮಾಣ ಮಾಡಿದ್ದಾರೆ. ಹಿಂದೆ ಶ್ರೀಲಂಕಕ್ಕೆ ಶ್ರೀರಾಮ ಸೇತುವೆ ಕಟ್ಟಿದರೆ, ಸಿಗಂದೂರಿಗೆ ಸೇತುವೆ ಕಟ್ಟಿದ್ದು ಯಡಿಯೂರಪ್ಪ, ರಾಘವೇಂದ್ರ. ನಾವು ಈಡಿಗರು, ನಾಮಧಾರಿಗಳು ಒಂದಾಗಿ ರಾಘವೇಂದ್ರರನ್ನು ಗೆಲ್ಲಿಸಿಕೊಡುತ್ತೆವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES