ಬೆಳಗಾವಿ: ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನು ಕಾಪಾಡಲೇಬೇಕೆಂಬ ಸ್ಪಷ್ಟ ನಿರ್ಣಯ ಮಾಡಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ರಾಮೇಶ್ವರಂ ಕೆಫೆ ಮೇಲಿನ ಬಾಂಬ್ ದಾಳಿ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಈ ಬಾಂಬ್ ಬ್ಲಾಸ್ಟ್ನ್ನು ಸಿಲ್ಲಿ ಪಾಯಿಂಟ್ ರೀತಿ ನೋಡ್ತಿದೆ. ಇದು ಸರ್ಕಾರದ ಒಟ್ಟಾರೆ ಆಲೋಚನೆ ಏನು ಅನ್ನೋದು ಹೇಳ್ತಿದೆ. ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಸರ್ಕಾರ ಕಾಪಾಡೋ ಪ್ರಯತ್ನ ಮಾಡಿತ್ತೋ, ಅದೇ ರೀತಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರೋರನ್ನ ರಕ್ಷಣೆ ಮಾಡೋ ಪ್ರಯತ್ನ ಮಾಡ್ತಿದೆ ಎಂದು ಸಿಎಮ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಮೊದಲನೇ ದಿನನೇ ಹೇಳಿದ್ರು,ಘಟನೆಯಲ್ಲಿ ರಾಜಕೀಯ ಬೇರೆಸಬೇಡಿ ಎಂದು ಅವರಿಗೂ ನಾನು ಕೇಳ್ತೀನಿ, ನೀವು ಸಹ ಇದ್ರಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಬೇಡಿ ಎಂದು ನಿಮ್ಮ ಶಾಸಕರಿಗೆ ತಿಳಿಸಿ. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಹುಡುಕಿ ಹಿಡೆಯಬೇಕಾಗಿದೆ. ಕರ್ನಾಟಕ ಬಹಳ ನೆಮ್ಮದಿಯಿಂದ ಇರುವ ಸ್ಥಳವಾಗಿದೆ. ಸರ್ವಜನಾಂಗದ ತೋಟ ಎಂಬ ಕುವೆಂಪುರವರ ನುಡಿಯಂತ ನಾವು ನಡೆಯುವವರು. ಆದ್ರೆ ದುರಂತಕಾರಿ ಸಂಗತಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದ ಮೇಲೆ ಇಂತಹ ಕೃತ್ಯಗಳು ಅಧಿಕವಾಗ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕೆಲ್ಲಾ ಕಡಿವಾಣ ಹಾಕದೇ ಇದ್ದಲ್ಲಿ, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಘನತೆ ಗೌರವ ಕಳೆದುಕೊಳ್ಳಬೇಕಾಗುತ್ತದೆ ಎಂದರು.