ಬಳ್ಳಾರಿ : ನಟ ಯಶ್ ನೋಡಲು ಬಂದ ಅಭಿಮಾನಿಯ ಕಾಲ ಮೇಲೆ ಬೆಂಗಾವಲು ಕಾರು ಹತ್ತಿರುವ ಘಟನೆ ಬಳ್ಳಾರಿಯ ನಗರದ ವಲಯದಲ್ಲಿ ನಡೆದಿದೆ.
ದೇವಸ್ಥಾನದ ಉದ್ಘಾಟನೆಗೆ ನಟ ಯಶ್ ಬಂದಿದ್ದರು. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆ ಸಮಾರಂಭಕ್ಕೆ ಯಶ್ ಆಗಮಿಸಿದ್ದರು.
ನಟ ಯಶ್ ತೆರಳುವ ಸಮಯದಲ್ಲಿ ಅಭಿಮಾನಿಗಳು ಕಾರು ಹಿಂಬಾಲಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಯಶ್ ನೋಡಲು ಬಂದಿದ್ದರು. ಈ ವೇಳೆ ಯಶ್ ಬೆಂಗಾವಲು ವಾಹನ ಅಭಿಮಾನಿ ಕಾಲ್ ಮೇಲೆ ಹರಿದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಮೇಲೆ ಕಾರು ಹರಿದಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.