ಬೆಂಗಳೂರು : ಬೈಕ್ ವೀಲಿಂಗ್ ವೇಳೆ ಭೀಕರ ಅಪಘಾತ ಸಂಭವಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯ ನವಯುಗ ಟೋಲ್ ಬಳಿ ನಡೆದಿದೆ.
ದಾಸರಹಳ್ಳಿ ಮೂಲದ ರಾಜೇಶ್ ಮೃತ ಯುವಕ. ರಾತ್ರಿ ನವಯುಗ ಟೋಲ್ನ ಎಕ್ಸಪ್ರೆಸ್ ಹೈವೇಗೆ ಬಂದ ವೀಲಿಂಗ್ ಪುಂಡರು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನವಯುಗ ಟೋಲ್ ಬಳಿ ಜಮಾಯಿಸಿ ನಂತರ, ನೆಲಮಂಗಲದವರೆಗೆ ವೀಲೀಂಗ್ ಮಾಡಿಕೊಂಡು ಬಂದಿದ್ದಾರೆ.
ನೆಲಮಂಗಲದ ಸುಭಾಷ್ನಗರದ ಬಳಿಯಿರುವ ಟೋಲ್ ಹತ್ತಿರ ವಾಪಸ್ ಬೆಂಗಳೂರು ಕಡೆಗೆ ಹೋಗುವಾಗ ಹೆದ್ದಾರಿ ಡಿವೈಡರ್ ಹತ್ತಿಸುತ್ತಿದ್ದಾಗ ಇದೇ ತಂಡದ ಶಾಹಿಲ್ ವೀಲಿಂಗ್ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗಾಯಗೊಂಡಿದ್ದ ಶಾಹಿಲ್ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಆತನ ಸ್ಥಿತಿಯೂ ಗಂಭೀರವಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.